ಈ ಆಧುನಿಕ ಯುಗದಲ್ಲಿ ಉತ್ತಮವಾದ ತಂತ್ರಜ್ನಾನಗಳನ್ನು ಬಳಸುತ್ತಾ ಎಲ್ಲಾ ಭೂಜೀವಿಗಳಿಗಿಂತಲೂ ಬುದ್ದಿಶಾಲಿ ಜೀವಿ “ಮಾನವ” ಎಂದುಕೊಳ್ಳುವಷ್ಟು ಮುಂದುವರೆದಿದ್ದೇವೆ. ಆದರೆ ಈ ಎಲ್ಲಾ ಜ್ಞಾನ, ಬುದ್ದಿಶಾಲಿತನದ ಮೂಲವು ಯಾವುದೆಂದು ಸ್ವಲ್ಪ ಯೋಚಿಸಬೇಕಾಗಿದೆ. ನಾವು ಇದನ್ನು ಮರೆತಿದ್ದೇವೆ. ನಮಗೆ ತಿಳಿಯದಂತೆ ಈ ಮೂಲವನ್ನು ನಾಶಮಾಡಿಕೊಂಡು ಬಂದಿದ್ದೇವೆ. ಅದೇ ಈ ಸುಂದರವಾದ “ಪ್ರಕೃತಿ”. ಎಲ್ಲಾ ವಿಷಯಗಳಿಗೂ, ತಂತ್ರಜ್ಞಾನಗಳಿಗೂ ಹಾಗು ನಾವು ಬದುಕಲು ರೂಡಿಸಿಕೊಂಡು ಬಂದಂತಹ ಪ್ರತಿ ಉದ್ಯೋಗವು ಕೂಡ ಇದೆ ನಿಸರ್ಗದ ಕಾಣಿಕೆಯಾಗಿದೆ. ಬನ್ನಿ ಒಮ್ಮೆ ಪ್ರಕೃತಿಯೊಳಗೆ ನಮ್ಮ ಚಿಂತನೆಯನ್ನು ಹರಿಸುವ.
ಮಾನವನು ಈ ಪ್ರಕೃತಿಯನ್ನು ನೋಡುತ್ತಾ ಬೆಳೆಯುತ್ತಾ ಬಂದಿರುವನು ಹಾಗೆ ಈತನ ಮೆದುಳು ಅದ್ಭುತ ಯೋಚನಾಶಕ್ತಿಯ ಆಗರವಾಗಿದ್ದು ಈ ಪರಿಸರವನ್ನು ಬಗೆಬಗೆಯಿಂದ ನೋಡುಲಾರಂಬಿಸಿದನು. ಈ ಪರಿಸರವನ್ನು ನೋಡಿ ಆನಂದಿಸಿದನು. ಅಲ್ಲದೆ ಈ ಆನಂದವನ್ನು ಅದ್ಭುತವಾಗಿ ವರ್ಣಿಸಲಾರಂಬಿಸಿದ, ಈತನು “ಕವಿ”ಯಾದ. ಈ ಸೌಂದರ್ಯವನ್ನ ಚಿತ್ರದ ಮೂಲಕ ಮೂಡಿಸಿ “ಕಲಾವಿದ”ನಾದನು. ಹೀಗೆ ಹೋಗುತ್ತಾ ಕ್ರಮೇಣ ಪ್ರಕೃತಿಯ ವಿಚಿತ್ರ ಸಂಗತಿಗಳನ್ನ ನೋಡಿ “ಇದು ಏಕೆ? ಅದು ಹೇಗೆ?” ಎನ್ನುತ್ತಾ ತನ್ನಲ್ಲಿ ಹಲವಾರು ಪ್ರಶ್ನೆಗಳನ್ನ ಕೇಳಲಾಂಬಿಸಿದನು. ಈತನ ಪ್ರಶ್ನೆಗಳು ಈತನನ್ನು ಸಂಶೋಧನೆಯಲ್ಲಿ ತೊಡಗುವಂತೆ ಮಾಡಿತು. ಈತ “ವಿಜ್ಞಾನಿ” ಎಂದು ಎನಿಸಿಕೊಂಡ. ಅದ್ಭುತವಾದ ಸಂಶೋಧನೆಯಿಂದ ಹಲವಾರು ರಹಸ್ಯಗಳನ್ನು ಭೇದಿಸಲು ಆರಂಭಿಸಿದ.
ಮುಂದುವರೆಯುತ್ತ ಮಾನವನು ಈ ನಿಸರ್ಗವನ್ನು ಬೆಳೆಸುವುದನ್ನು ಚೆನ್ನಾಗಿ ಕಲಿತ, ತನ್ನ ಹೊಟ್ಟೆಪಾಡಿಗಾಗಿ ಆಹಾರ ಪದಾರ್ಥಗಳನ್ನು, ಸಸ್ಯಗಳನ್ನು ಬೆಳೆಸುವುದಲ್ಲದೆ ಪ್ರಾಣಿಗಳ ಸಾಕಣೆಯಲಲ್ಲಿಯು ನಿಪುಣನಾಗಿ “ರೈತ” ಎಂದು ಹೇಳಲ್ಪಟ್ಟನು. ವಾಸಕ್ಕಾಗಿ ಮರದ ಸಲಕರಣೆಗಳ ಮಾಡಿ “ಕಮ್ಮಾರ”ನೂ, ದೇಹ ರಕ್ಷಣೆಯ ಸಲುವಾಗಿ ಚರ್ಮದ ತೊಡುಗೆಗಳನ್ನ ಮಾಡಿ “ಚಮ್ಮಾರ”ನಾಗಿಯೂ, ಕಲ್ಲಿನ ಮೂರ್ತಿಗಳ ಮಾಡಿ “ಶಿಲ್ಪಿ”ಯಾಗಿ ಬೆಳೆದು ನಿಂತನು. ಹೀಗೆ ಹಲವಾರು ಬದಲಾವಣೆಗಳನ್ನು ತಂದುಕೊಂಡ ಮಾನವ ತಂತ್ರಜ್ಞಾನವನ್ನು ಇಲ್ಲಿಯವರೆಗೆ ತರಲು ಯಶಸ್ವಿಯಾದ. ಸ್ನೇಹಿತರೇ, ಇದಕ್ಕೆಲ್ಲವೆ ಈ ಪ್ರಕೃತಿಯೇ ಕಾರಣವೆಂದು ಅನುಸುತಿಲ್ಲವೇ? ಈ ನಿಸರ್ಗದಿಂದಲೇ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಔಷಧೀಯ ಮೂಲವನ್ನು ತೋರಿಸಿಕೊಟ್ಟ “ಮಹರ್ಷಿ ಪತಂಜಲಿ”ಯವರು ಆಯುರ್ವೇದದ ಪಿತಾಮಹವೆಂದಿಸಿಕೊಂಡರು. ಪ್ರತೀ ಪುರಾಣಗಳಲ್ಲೂ ಈ ಪ್ರಕೃತಿ ಮಹತ್ವಪೂರ್ಣವಾದ ಪಾತ್ರವಹಿಸುತ್ತದೆ. ನೀವು ಕೂಡ ಯಾವುದೇ ವಿಷಯ ಅಥವಾ ಉದ್ಯೋಗವನ್ನೆ ನೆನೆದು ಅದರ ಮೂಲವ ಹುಡುಕಲು ಪ್ರಯತ್ನಿಸಿ, ಅದು ಈ ಪ್ರಕೃತಿದೇವಿಯ ಮಡಿಲಿಗೆ ಕೊನೆಯಲಿ ತಲುಪುದು.
ಈ ಪ್ರಕೃತಿಯಲ್ಲಿ ದೊರಕದ ವಿಷಯಗಳಿಲ್ಲ, ಎಲ್ಲಾ ಪ್ರಶ್ನೆಗೂ ಉತ್ತರ ಇಲ್ಲೇ ದೊರಕುವುದು.ಇಷ್ಟೆಲ್ಲ ಮಹತ್ವವೆಂದೆನಿಸಿಕೊಂಡರೂ ಈಗ ಈ ಪರಿಸರವು ಈ ಮಾನವನಿಂದಲೇ ನಾಶಗೊಳ್ಳುತ್ತಿದೆ, ಎಂತಹ ಒಂದು ದುರ್ದೈವ ! ತನ್ನ ಅಭಿವೃದ್ದಿ ಹಾಗು ಸಕಲ ಜ್ಞಾನವು ಈ ನಿಸರ್ಗದ ಕಾಣಿಕೆಯೆಂಬುದನ್ನು ಮರೆತು ತನ್ನ ಸ್ವಾರ್ಥಕ್ಕಾಗಿಯೂ ಮತ್ತು ತನ್ನ ಐಷರಾಮಿ ಜೀವನಕ್ಕಾಗಿ ನಿಸರ್ಗದ ನಾಶದ ಹಾದಿಯನ್ನು ಹಿಡಿದಿದ್ದಾನೆ. ಈ ಪರಿಸರವನ್ನು ನೋಡುತ್ತಿರುವ ಮಾನವ “ಇದು ನಮಗಾಗಿ ದೊರೆತ ಕಾಣಿಕೆ” ಎಂದೆನ್ನುವ ಬದಲು “ಯಾರದೋ ಸ್ವತ್ತು, ಲಾಭ ನನಗೆ” ಎಂದು ಅರಣ್ಯ ಸಂಪತ್ತನ್ನೇ ಲೂಟಿ ಮಾಡುತ್ತಾ ಬಂದಿದ್ದಾನೆ.
ಆದರೆ, ನಮ್ಮ ಆದಿ ಪ್ರಕೃತಿಯಾಗಿದ್ದರಿಂದ ಇದರ ಅಂತ್ಯವು ನಮ್ಮ ಅಂತ್ಯವಾಗಿಯೂ ಇರುವುದು. ಇದರ ಬಗ್ಗೆ ಬುದ್ದಿವಂತ ಮಾನವ ಗಂಭೀರವಾಗಿ ಯೋಚಿಸಬೇಕಾಗಿದೆ. ಈಗಾದರು ಎಚ್ಚೆದ್ದು ಪ್ರಕೃತಿಯ ಉಳಿವಿಗಾಗಿ ಮತ್ತು ಬೆಳೆಸುವ ಪ್ರಯತ್ನವನ್ನ ಮಾಡಬೇಕಾಗಿದೆ. ಪ್ರಕೃತಿಯ ರಕ್ಷಣೆಯೇ ನಮ್ಮ ಸ್ವರಕ್ಷಣೆಯಾಗಿದೆ. ಇದು ಈ ಮಾನವಕುಲದ ಅಭಿವೃದ್ದಿಯೊಂದಲ್ಲದೆ ರಾಷ್ಟ್ರದ ಸಮೃದ್ಧ ಬೆಳವಣಿಗೆಗೂ ದಾರಿಯಾಗುವುದು.

0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ