ಜೀವನವನೊಮ್ಮೆ ಸಾಗಿಸು ಎಲ್ಲವ ಅನುಸರಿಸಿ
ಹೊಟ್ಟೆ ಪಾಡಿಗಾಗಿ ಕಣ ಬೆವರನ್ನ ಸುರಿಸಿ
ಕಷ್ಟವೆಂಬುದ ವರವೆಂದು ಅನುದಿನವು ಭಾವಿಸಿ
ಹಿಡಿಯೆನು ಅಡ್ಡದಾರಿಯ ಸಿರಿವಂತಿಕೆಯ ಬಯಸಿ
“ಬಡವನಾಗಿಯೇ ಉಳಿಯುವೆ” ನಿಮಗೆಲ್ಲ ತಲೆಬಾಗಿಸಿ…
ಮಳೆಗಾಲಕ್ಕೆ ಸೋರುವ ಈ ಮನೆಯು
ಮಾಡದು ದುರ್ಬಲ ಎನ್ನ ಮನವ..
ಚಳಿಗಾಲಕ್ಕೆ ಸಿಗದ ಆ ಬರೆಬಟ್ಟೆಯು
ಮರೆಸದು ಎನ್ನ ನಂಬಿಕೆಯೆಂಬ ಕಿರಣವ..
“ಬಡವನಾಗಿಯೇ ಉಳಿಯುವೆ” ಇದನ್ನೆಲ್ಲ ಸಹಿಸಿ…
ಹೊಸನಂಬಿಕೆಯೊಂದು ಬೇಕು ಬಡಪಾಯಿ ಜೀವನಕೆ
ಪ್ರತಿದಿನವೆಂಬ ಹೊಸಹರುಷವು ಸಾಕೆನ್ನ ಉಳಿವಿಗೆ..
ದೊರೆಯಾಗೆನು ನಾನು, ಈ ನೆಮ್ಮದಿಯ ಅಳಿಸಿ
ಸಾಯುವವರೆಗೆ ದುಡಿಯುವೆ ಈ ದೇಹವ ಸವೆಸಿ
“ಬಡವನಾಗಿಯೇ ಉಳಿಯುವೆ” ಎಲ್ಲವನ್ನ ತ್ಯಜಿಸಿ…
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ