ಗುಡುಗು-ಸಿಡಿಲುಗಳ ಸದ್ದ ಕೇಳಲು
ಆಯಿತು ಮನದಲ್ಲೊಂದ ಕಂಪನ…
ಆ ಮಿಂಚಿನ ರಭಸದ ಹೊಡೆತಕೆ
ಈ ಧರೆಯೇ ನಿನಗಾಗಿ ತಲ್ಲಣ…
ಸೂರ್ಯನು ಹೆದರಿ ಮರೆಯಾದನು
ಕಾರ್ಮೋಡವಲ್ಲವೇ ಇದಕ್ಕೆ ಕಾರಣ…
ಬೀಸೋ ಗಾಳಿಯು ಸುತ್ತಾಡಲು
ತಗರೆಲೆಗಳು ಸಿಲುಕಿ ಮರಣ…
ಮಳೆಹನಿಗಳು ಮುತ್ತಿಡಲು ಈ ನೆಲವನ
ಹಸಿಹಸಿರಾಗಿ ಕೂಡಿತು ತನುಮನವು…
ನಿನ್ನ ಬಣ್ಣಿಸಲಾಗದೆ ಈ ಕವನ
ಬರೆಯುತ ಮರೆತೆನು ಪ್ರತಿಕ್ಷಣವು…

0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ