Video ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Video ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜುಲೈ 27, 2019

ಮಲೆನಾಡು "ಮಲೆಗಳಿಲ್ಲದ ನಾಡು" - ನಿಖರ ಮಾತು 4



ನಾನು ನನ್ನ ಬಾಲ್ಯದ ದಿನಗಳನೊಮ್ಮೆ ನೆನೆದುಕೊಂಡರೆ ನೆನಪಾಗುವುದು ನಮ್ಮನೆಯ ಸುತ್ತಮುತ್ತಲಿನ ಹಸಿರು ಹಸಿರಾದ ಗಿಡಮರಬಳ್ಳಿಗಳು, ಹಲವಾರು ಪ್ರಾಣಿ-ಪಕ್ಷಿಗಳ ಕೂಗು, ವಿಧವಿಧವಾದ ಹಾವುಗಳು ಮತ್ತು ಚಿಟ್ಟೆಗಳು. ಮನೆಯ ಒಳಗೆ ಕೂಡ ಹಲವಾರು ಬಾರಿ ಹಾವುಗಳು ನುಸುಳಿ ಬಂದದುಂಟು. ಹವಾಮಾನಗಳ ಸನ್ನಿವೇಶಗಳು ಮಲೆನಾಡಿನಲ್ಲಿ ಬೇರೆಯೇ ಅನುಭವಗಳನ್ನು ಸೃಷ್ಟಿಮಾಡುತ್ತಿದ್ದವು. ಮಲೆನಾಡಿನಲ್ಲಿ ಬೇಸಿಗೆ ಎಂಬುದು ಅಷ್ಟೊಂದು ವ್ಯತ್ಯಾಸ ತರುತ್ತಿರಲಿಲ್ಲ. ಮಧ್ಯಾಹ್ನದ ಸಮಯಕ್ಕೆ ಹೆಚ್ಚು ಬಿಸಿಲಿದ್ದರೂ ಸೆಕೆಯಾಗುವ ಸನ್ನಿವೇಶವೇ ಇರಲಿಲ್ಲ. ಸಂಜೆ ವೇಳೆಗೆ ತಂಪಾಗಿ, ಚಳಿಗಾಲದ ಹವಾಮಾನ ಬಂದುಬಿಡುತ್ತಿತ್ತು. ವಿದ್ಯುತ್ ಕಾಣದಿರುವ ನಾವು ಸೀಮೆಎಣ್ಣೆಯ ದೀಪದಿಂದಲೇ ನಮ್ಮ ಪ್ರತಿರಾತ್ರಿಯನ್ನು ಸಾಗುತಿದ್ದೆವು.

ಮಳೆಗಾಲವಂತು ಹೇಳುವುದೆ ಬೇಡ! ಮಳೆಯ ಆ ರಭಸವು ನಮ್ಮನ್ನು ಕುಳಿತ ಜಾಗದಿಂದ ಏಳದಂತೆ ಜಡವಿಡಿಸಿಬಿಡುತ್ತಿತ್ತು. ಒಂದುವೇಳೆ ಮನೆಯಿಂದ ಹೊರಗೆ ಹೋದರೆ, ಬರುವಾಗ ಕಾಲುಗಳನ್ನೊಮ್ಮೆ ಆಳವಾಗಿ ನೋಡಿಕೊಳ್ಳಬೇಕಾಗಿತ್ತು ಅಷ್ಟೊಂದು "ಜಿಗಣೆ"ಗಳ ಹಾವಳಿ. ಒಲೆಯ ಬದಿ ಚಳಿಕಾಯಿಸಲು ಕುಳಿತರೆ ಏಳುವ ಜಾಯಮಾನವೇ ಇಲ್ಲ. ಬೆಚ್ಚಗೆ ಕಾಫಿ ಕುಡಿದು ಹಲಸಿನ ಬೀಜವನ್ನು ಒಲೆಯಲ್ಲೆ ಸುಟ್ಟು ತಿನ್ನುವ ಮಜಾವೇ ಬೇರೆಯಾಗಿತ್ತು. ಇಂತಹ ಪ್ರಸಂಗಗಳು ಮಲೆನಾಡಿನಲ್ಲೇ ಅನುಭವಿಸಲು ಸಿಗುವುದು. ಮಳೆಗಾಲ ಮುಗಿದರೆ ಸಾಕು, ನಂತರ ಚಳಿಗಾಲದ ಹಾವಳಿ. ಎಷ್ಟು ಸ್ನಾನ ಮಾಡಿದರೂ, ನೀರಿನ ಅಂಡೆ ಕಾಲಿಯಾಗುವವರೆಗೆ ಸ್ನಾನ ಮಾಡಬೇಕೆನಿಸುತ್ತಿತ್ತು. ನಿಜವಾಗಿಯೂ ಹೇಳಬೇಕೆಂದರೆ, ಮಲೆನಾಡಿನಲ್ಲಿ ಮಳೆಗಾಲ ಮತ್ತು ಚಳಿಗಾಲಗಳೇ ಪೂರ್ತಿ ವರ್ಷ ನಡಿಯುತ್ತಿತ್ತು.

ಇವು ಈಗ ಬರಿ ನೆನಪುಗಳಾಗಿಯೇ ಉಳಿದಿರುವುದು ಮಾತ್ರ. ಈಗಿನ ಮುಂದುವರಿಕೆಯೋ, ತಂತ್ರಜ್ಞಾನದ ಬೆಳವಣಿಗೆಯೋ, ಇಲ್ಲವೆ ದುರಾಸೆಯೋ ಮಲೆನಾಡಿದಲ್ಲಿ ಮಲೆಗಳ ನಾಶವು ಹೆಚ್ಚಾಗಿದ್ದು ಪೂರ್ಣವಾಗಿ ಹವಾಮಾನದಲ್ಲಿ ಬದಲಾವಣೆಯನ್ನು ತಂದಿದೆ. ಹಿರಿಯರು ಅಂದಾಜಿಸುತಿದ್ದ ಹವಾಮಾನಗಳ ಅವಧಿ ಈಗ ಅಂದಾಜು ಮಾಡಲಾಗದಷ್ಟು ಆಳವಾಗಿ ಹೋಗಿಬಿಟ್ಟಿವೆ. ಯಾವಾಗ ಮಳೆ ಬರುವುದೋ, ಚಳಿಗಾಲ ಇರುವುದೇ, ಯಾವಾಗ ಶುರು ಅಥವಾ ಅಂತ್ಯವೆಂಬುದು ತಿಳಿಯದಂತಾಗಿದೆ. ಮಲೆಗಳಿಲ್ಲದೆ ಮುಂದೊಮ್ಮೆ ಮಲೆನಾಡು "ಮಲೆಗಳಿಲ್ಲದ ನಾಡು" ಆಗುವದು ಎಂಬ ಭಾಸವಾಗುತ್ತಿದೆ.

ಸರಿಸುಮಾರು ಐದಾರು ವರ್ಷಗಳ ಹಿಂದಿನಿಂದ (ಅಂದಾಜು ೨೦೦೨ - ೨೦೦೩) ಮಲೆನಾಡಿನ ಪ್ರತಿಯೊಂದು ಮನೆಯಲ್ಲಿಯೂ ಕೂಡ ಗಾಳಿಯಂತ್ರ (ಫ್ಯಾನ್)ಗಳ ಬಳಕೆ ಹೆಚ್ಚಾಗುತ್ತಿದೆ. ನಮ್ಮ ಮನೆಯ ಬಗ್ಗೆಯೇ  ಹೇಳಬೇಕೆಂದರೆ, ಬೇಸಿಗೆಗಾಲಕ್ಕೂ ಹೊದಿಕೆ ಹಾಕಿ ಮಲಗುತಿದ್ದವರು ಈಗ ಗಾಳಿಯಂತ್ರಗಳಿಲ್ಲದೆ ಮಲಗುವುದು ಕಷ್ಟವಾಗಿಬಿಟ್ಟಿದೆ. ಹಾಲು, ತರಕಾರಿಗಳು ಹಲವಾರು ದಿನಗಳವರೆಗೆ ಇಡಬಹುದಾದ ಊರಿನಲ್ಲೇ ಶೀತಲೀಕರಣ ಯಂತ್ರ(ಫ್ರಿಡ್ಜ್)ದ ಅವಶ್ಯಕತೆ ಬಂದುಬಿಟ್ಟಿದೆ. ತಾಪಮಾನ ಹೆಚ್ಚಿದೆ, ಮಳೆ ಸಮಯಕ್ಕೆ ಬರುತಿಲ್ಲ, ಚಳಿಗಾಲವಂತು ತಿಳಿಯುತ್ತಲೇ ಇಲ್ಲ.

ಮಾನವನೆಂಬುದು ಈ ಭೂಮಿಯ ಒಂದು ಜೀವಿಯಾದರೂ, ಭೂಮಿಯನ್ನೇ ನಾಶ ಮಾಡುವ ದುರ್ಗುಣ ನಮ್ಮಲ್ಲಿ ಮಾತ್ರ ಇರುವುದು. ಹೆಚ್ಚು ಬುದ್ದಿವಂತಿಕೆ ಸ್ವಯಂ ನಾಶಕ್ಕೆ ಕಾರಣವಾಗುವ ಮಾತು ಇಲ್ಲಿ ವಾಸ್ತವಕ್ಕೆ ಬರುತ್ತಿದೆ. ಇವೆಲ್ಲವು ಪ್ರಕೃತಿ ವಿಕೋಪಕ್ಕೆ ಕಾರಣವಾಗಿ ಮುಂದೊಮ್ಮೆ ಮನುಕುಲವೆಂಬುದೇ ಅಳಿಸಿಹೋಗುವುದಂತು ನಿಜ. ಈಗಲೂ ಸಮಯ ಮಿಂಚಿಲ್ಲ, ಪ್ರತಿಯೊಬ್ಬರು ಮರ ನೆಡುವ ಮೂಲಕ, ಪರಿಸರ ಮಾಲಿನ್ಯ ನಿಯಂತ್ರಣ ಮಾಡುವ ಮೂಲಕ ಮತ್ತೊಮ್ಮೆ ಈ ಭುವಿಯನ್ನು ಹಸಿರಾಗಿಸಬಹುದು. ಇದು ನನ್ನದೋ ಅಥವಾ ಬರಿ ನಿನ್ನದೋ ಭುವಿಯಲ್ಲ, ನಮ್ಮೆಲ್ಲರ ಭುವಿ. ಪ್ರತಿಯೊಬ್ಬರ ಖಾಳಜಿಯು ಇಲ್ಲಿ ಅತಿಅವಶ್ಯಕ.

ಶುಕ್ರವಾರ, ಜುಲೈ 19, 2019

"ಭಿಕಾರಿ ಬದುಕು" - ಕವನ 16




ಮುಂಜಾನೆಯ ಆ ತಾಜಾ ಮಜಾ
ಇಲ್ಲವಾಗಿದೆ ...
ಹೊಸದಿನವೆಂಬ ಖುಷಿಯೂ  ಇಂದು
ಕಮ್ಮಿಯಾಗಿದೆ ...
ಸೂರ್ಯಚಂದ್ರರ ಬರುವು ತಿಳಿಯದೆ
ಮರೆತೇಹೋಗಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....

ಏನೇ ಆಗಲಿ, ಊರೇ ಬೀಳಲಿ ಎಂಬ
ಭಾವನೆ ಬೆಳೆದಿದೆ ...
ತವಕವೆ ಇಲ್ಲದ ಈ ಹೃದಯ
ಮೆಲ್ಲಚಲಿಸಿದೆ ... 
ತಾರುಣ್ಯ ಮರೆತ ದೇಹವು
ಸೊರಗಿಹೋಗಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....

ಏನೋ ತಿಳಿದುಕೊಳ್ಳುವ ಆಸೆ
ಈಗಮಾಸಿದೆ ...
ಮಾಸದ ಸಂಬಳ ಸರಿಸಮಯಕ್ಕೆ
ಬಂದುಸೇರಿದೆ ...
ಎಲ್ಲಾ ಇದ್ದೂ, ಏನೋ ಇಲ್ಲವೆಂಬ
ಕೊರಗುಮೂಡಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....


ಗುರುವಾರ, ಮೇ 9, 2019

"ನಡುರಾತ್ರಿಯ ಹಾದಿಯಲಿ" - ಕವನ 15


ನಡುರಾತ್ರಿಯ ಹಾದಿಯಲಿ
ನಡೆಯುತ್ತಿರುವೆನು ನಾನೊಬ್ಬನೇ ...
ಬೀದಿದೀಪಗಳು ತಲೆಬಾಗಿ
ನೋಡುತ್ತಿವೆ ನನ್ನನೇ ...
ಧರೆಯ ಬೆಡಗಿಗೆ ಚಂದ್ರನು
ನಾಚಿ ಮರೆಯಾದ ಬೇಗನೇ...
ಆಹಾ! ರಾತ್ರಿಯ ಈ ಸೊಗಸನು
ಸವಿಯದವ ಇದ ಬಲ್ಲನೇ ...


ನಡುರಾತ್ರಿಯ ಹಾದಿಯಲಿ
ಏಕಾಂಗಿಯಾದೆನು ನನ್ನೊಳಗೆ...
ಜೊತೆಗಿರಬೇಕಿತ್ತು ಒಂದು ಸಖಿ  
ಇದನೆನೆದು ಮೂಡಿತು ಮುಗುಳುನಗೆ...
ನಾಯಿಗಳು ಬೊಗಳದೆಯೇ
ಗುರುಗುಟ್ಟುತ್ತಿವೆ ಸುಮ್ಮಗೆ ...
ನಡೆದು ಆಯಾಸವೆನಿಸಿದರೂ
ಸಾಗುತ್ತಿರುವೆನು ಮೆಲ್ಲಗೆ...

ನಡುರಾತ್ರಿಯ ಹಾದಿಯಲಿ
ಸುಳಿಯುತಿಹುದು ಗುರಿಯೋಚನೆ...
ಮನುಷ್ಯನಿರದ ಈವೇಳೆಗೆ  
ಶಾಂತತಾಳಿದೆ ಏನ ಭಾವನೆ ...
ಬೀಸೋ ಗಾಳಿಗೆ ಸಿಲುಕಿ
ಧೂಳುಕಣಗಳ ಚಲನೆ...
ಬಹುದೂರ ಬಾಕಿ ಇರುವುದೂ
ತಲುಪಲೂ ನಮ್ಮನೆ...


"ಮಹಾಗುರು" - ಕವನ 14




ಒಳ್ಳೆತನವ ಕಲಿಸಯ್ಯಾ ಗುರುವೇ
ನೀನಾಗುವೆ ಜಗದ ಮಹಾಗುರು
ಶಿಷ್ಯನಿಗಿಂತಲೂ ನೀನಿರುವೆನು ಎತ್ತರ ಬಹುಪಾಲು ...

ಕಳ್ಳತನವೆಂಬುದನ್ನ ಕಳಿಸಿದರಯ್ಯ
ಮರುಗುವೆಯೋ ಇದನ್ನರಿತು ಮುಂದು
ಶಿಷ್ಯನಾಗುವನು ನಿನ್ನ ಮೀರಿಸುವ ಮಹಾಕಳ್ಳ ನು ...

ಲೋಕನಿಯಮವ ಯಾರರಿವರಯ್ಯ
ಒಳ್ಳೆತನವೆಂಬುದು ಬೆಳೆಸುವುದು ಎತ್ತರದಿ
ಕಳ್ಳತನವು ಅಳಿಯುದು ಈ ಜಗದಿ ...

ಗುರುವಾರ, ಮಾರ್ಚ್ 28, 2019

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲ !! | ಟಾಂಗ್-ಕಿಂಗ್ (ಲೇಖನ) 2


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಳೆದ ಕೆಲವು ವರುಷಗಳಿಂದ ಪ್ರಯಾಣಿಕರ ನಿರಂತರ ಧನಾತ್ಮಕ ವೃದ್ಧಿಯಿಂದ ಹೆಸರುಗಳಿಸಿದೆ.




ಆದರೆ ಈಗ ಮಂಗಳೂರಿನಲ್ಲಿ ವೈಮಾನಿಕ ಪ್ರಯಾಣಿಕರ ಸಂಖ್ಯೆ ಕುಗ್ಗುತ್ತಿದೆ. ಆದರೇ ಇದೇನು ದಿಢೀರ್ ಬದಲಾವಣೆಯಲ್ಲ, ಭವಿಷ್ಯದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿಪ್ರಯಾಣಿಕರ ಸಂಖ್ಯೆ ಇಳಿಮುಖವಾಗುವುದೆಂದು ಕಳೆದ ಕೆಲವು ವರುಷಗಳಿಂದಲೇ ಅಂದಾಜಿಸಲಾಗುತಿತ್ತು. ಈ ಸಂದೇಹವನ್ನು ಹುಟ್ಟು ಹಾಕಲು ಮುಖ್ಯ ಕಾರಣಾವಾಗಿದ್ದು ಕೇರಳ ರಾಜ್ಯದ ಕಣ್ಣೂರು ಎಂಬ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಾರಂಭಿಸಿದ ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಹೌದು, ತಿರುವನಂತಪುರಂ, ಕೊಚ್ಚಿ,ಕಲ್ಲಿಕೋಟೆ ನಂತರ ಕಣ್ಣೂರು ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ. (ಕರ್ನಾಟಕದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಮಂಗಳೂರು ಮಾತ್ರ) ಆದರೆ ಇದರಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಏನು ತೊಂದರೆ ಎಂದು ಕೇಳುವುದಾದರೆ ಕಣ್ಣೂರು ಇರುವುದು ಮಂಗಳೂರಿನಿಂದ ಬರೇ ೧೪೩ ಕಿ.ಮೀ. ದೂರದಲ್ಲಿ. ಈ ಮೊದಲು ಮಂಗಳೂರು ವಿಮಾನ ನಿಲ್ದಾಣ ಬರೀ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಾಸರಗೋಡು ಹಾಗು ಕೇರಳದ ಉತ್ತರ ಭಾಗದ ಜಿಲ್ಲೆಯ ಪ್ರಯಾಣಿಕರಿಗೂ ಆಸರೆಯಾಗಿತ್ತು. ಆದರೆ ನೂತನ ಕಣ್ಣೂರು ವಿಮಾನ ನಿಲ್ದಾಣದವು ಕೊಡಗು ಹಾಗು ಕಾಸರಗೋಡು ಜಿಲ್ಲೆಗಳಿಗೆ ಸಮೀಪದಲ್ಲಿರುವುದರಿಂದ ಈ ಜಿಲ್ಲೆಯ ಪ್ರಯಾಣಿಕರು ಕಣ್ಣೂರಿನ ಕಡೆಗೆ ಆಕರ್ಷಿತರಾಗೋದು ಸರ್ವೇ ಸಾಮಾನ್ಯ. ಮಾತ್ರವಲ್ಲದೆ ಕಣ್ಣೂರಿನ ವಿಮಾನ ನಿಲ್ದಾಣದ ಓಟದಾರಿ (ರನ್ ವೇ) ಮಂಗಳೂರಿನ ನಿಲ್ದಾಣಕ್ಕಿಂತ ಬರೋಬ್ಬರಿ ೧೦೦೦ ಮೀಟರ್ ಉದ್ದವಿದೆ (ಒಟ್ಟು ಉದ್ದ ೩೫೦೦ ಮೀ) ಹೀಗಾಗಿ ಇಲ್ಲಿ ವಿದೇಶಿ ವೈಮಾನಿಕ ಸಂಸ್ಥೆಗಳು ಪ್ರಯಾಣಕ್ಕಾಗಿ ಹಾತೊರೆಯುತ್ತಿವೆ. ಮಂಗಳೂರಿನ ಟೇಬಲ್ ಟಾಪ್ ರನ್ ವೇ ಉದ್ದ ಬರೇ ೨೪೫೦ ಮೀಟರ್ ಗಳಿಗೆ ಸೀಮಿತವಾಗಿರಿರುವುದರಿಂದ ವಿದೇಶಿ ವಿಮಾನಗಳು ಈ ಕಡೆ ತಲೆನೂ ಹಾಕುತ್ತಿಲ್ಲ. (ಮಂಗಳೂರಿನಿಂದ ಹಾರಾಟ ನಡೆಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳು ಭಾರತೀಯ ಮೂಲದವೇ ಆಗಿವೆ.)

ಅಂತೂ ಡಿಸೆಂಬರ್ ೦೯, ೨೦೧೮ ರಂದು ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆಯಾಗಿ ಲೋಕಾರ್ಪಣೆಗೊಂಡಿತು. ಕಳೆದ ಮೂರು ತಿಂಗಳಲ್ಲಿ ಕಣ್ಣೂರಿನಲ್ಲಿ ವಿಮಾನಗಳ ಹಾರಾಟ ಸಂಖ್ಯೆ ವೃದ್ಧಿಯಾಗುತ್ತಲೇ ಬರುತ್ತಿದೆ. ಅದಕ್ಕೆ ಪೂರಕವಾಗಿ ಕಳೆದ ಮೂರು ತಿಂಗಳಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ.

ಹಾಗಾದರೆ ಊಹೆ/ಅನುಮಾನ/ನುಡಿದ ಭವಿಷ್ಯ ನಿಜವಾಯಿತೇ? ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆಯಿಂದ ಮಂಗಳೂರು ನಿಲ್ದಾಣಕ್ಕೆ ಪೆಟ್ಟು ಬಿತ್ತೇ?

ಇಲ್ಲ, ಇದ್ಯಾವುದು ನಿಜವಲ್ಲ,

ಒಂದು ಬಾರಿ ಈ ಕೆಳಗಿನ ವಿಷಯಗಳನ್ನು ಪರಿಗಣಿಸಿ.

೧. ದೂರ :

ಕಾಸರಗೋಡು ಹಾಗು ಮಡಿಕೇರಿ (ಕೊಡಗು) ಜನರಿಗೆ ಈ ಎರಡು ವಿಮಾನ ನಿಲ್ದಾಣಗಳು ಎಷ್ಟು ದೂರದಲ್ಲಿವೆ ಎಂದು ಪರಿಶೀಲಿಸೋಣ.


ಅ) ಕಾಸರಗೋಡು-ಮಂಗಳೂರು


ಕಾಸರಗೋಡು ನಿಂದ ಮಂಗಳೂರು ೫೯ ಕಿ.ಮೀ. (ಸಮಯ ೧ ಘಂಟೆ ೩೦ ನಿಮಿಷಗಳು)


ಆ) ಕಾಸರಗೋಡು - ಕಣ್ಣೂರು



ಕಾಸರಗೋಡು ನಿಂದ ಕಣ್ಣೂರು ೧೧೨ ಕಿ.ಮೀ. (ಸಮಯ ೩ ಘಂಟೆ ೧೦ ನಿಮಿಷಗಳು)


ಕಾಸರಗೋಡಿ ನಿಂದ  ಕಣ್ಣೂರು , ಮಂಗಳೂರಿಗಿಂತ ಬರೋಬರಿ ಎರಡು ಪಟ್ಟು ದೂರದಲ್ಲಿದೆ.
ಸ್ವತಃ ಕಣ್ಣೂರು ನಗರದಿಂದ ಕಣ್ಣೂರು ವಿಮಾನ ನಿಲ್ದಾಣ ಸುಮಾರು ೨೭ ಕಿ. ಮೀ. ದೂರದಲ್ಲಿದೆ. ಕಾಸರಗೋಡು ಜಿಲ್ಲೆಯ ದಕ್ಷಿಣ ತುತ್ತ ತುದಿಯಿಂದಲೂ ಮಂಗಳೂರೇ ಸಮೀಪ. ಹೀಗಾಗಿ ದುಬೈ ಹಾಗು ಇತರೆ ಗಲ್ಫ್ ರಾಷ್ಟ್ರಗಳಿಗೆ ಹೋಗುವ ಕಾಸರಗೋಡಿನ ಪ್ರಯಾಣಿಕರು ಕಣ್ಣುರಿನೆಡೆಗೆ ಮುಖಮಾಡುತ್ತಾರೆ ಎಂಬ ಊಹಾ ಪೋಹಾ ವನ್ನು ಸುಲಭವಾಗಿ ತಳ್ಳಿ ಹಾಕಬಹುದು.


ಈಗ ಕೊಡಗು ಜಿಲ್ಲೆ ನೋಡೋಣ.

ಇ) ಮಡಿಕೇರಿ-ಮಂಗಳೂರು



     ಮಡಿಕೇರಿ (ಕೊಡಗು)-ಮಂಗಳೂರು ೧೪೪ ಕಿ.ಮೀ. (ಸಮಯ ೩ ಘಂಟೆ ೨೩ ನಿಮಿಷಗಳು)


ಈ) ಮಡಿಕೇರಿ-ಕಣ್ಣೂರು



            ಮಡಿಕೇರಿ(ಕೊಡಗು)-ಕಣ್ಣೂರು ೯೦ ಕಿ.ಮೀ (ಸಮಯ ೨ ಘಂಟೆ ೩೩ ನಿಮಿಷಗಳು)

ಮಡಿಕೇರಿ ಜನರಿಗೆ ಕಣ್ಣೂರು ವಿಮಾನ ನಿಲ್ದಾಣ ಮಂಗಳೂರಿಗಿಂತ ಹೆಚ್ಚು ಸಮೀಪ. ಕೊಡಗಿನ ಮತ್ತೊಂದು ನಗರ ವಿರಾಜಪೇಟೆಯಿಂದ ಕಣ್ಣೂರು ಬರೇ ೬೦ ಕಿ.ಮೀ. ದೂರದಲ್ಲಿ ಇದೆ. ಹಾಗಾಗಿ ಇಲ್ಲಿನ ಜನರು ಮಂಗಳೂರಿಗೆ ಬರುವ ಸುಮಾರು ಒಂದರಿಂದ ಎರಡು ತಾಸಿನಷ್ಟು ಸಮಯವನ್ನು ಉಳಿಸಬಹುದಾಗಿದೆ. ಮಾತ್ರವಲ್ಲದೆ ಕಣ್ಣೂರು ವಿಮಾನ ನಿಲ್ದಾಣದಿಂದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ದಲ್ಲಿಯೂ ಬೆಳವಣಿಗೆಯಾಗುವ ಸಾಧ್ಯತೆಗಳಿವೆ.


) ವಿಮಾನಯಾನ ತಾಣಗಳು

ಇನ್ನು ಈ ಎರಡು ವಿಮಾನ ನಿಲ್ದಾಣಗಳು ಯಾವೆಲ್ಲ ಜಾಗಗಳಿಗೆ ಪ್ರಯಾಣ ಕಲ್ಪಿಸಿ ಕೊಡುತ್ತವೆ ಎಂದು ನೋಡೋಣ.

ಮಂಗಳೂರಿನ ವಿಮಾನಯಾನ ತಾಣಗಳು



ಕಣ್ಣೂರಿನ ವಿಮಾನಯಾನ ತಾಣಗಳು:




ಕಣ್ಣೂರು ಹಾಗು ಮಂಗಳೂರಿನಿಂದ ವಿಮಾನಗಳು ಹೆಚ್ಚು ಕಮ್ಮಿ ಸಮನಾದ ಜಾಗಗಳಿಗೆ ಪ್ರಯಾಣಿಸುತ್ತಿವೆ. ಸ್ಪಷ್ಟವಾಗಿ ಕಣ್ಣೂರಿನಿಂದ ವಿಮಾನಗಳು ಇನ್ನು ಪೂರ್ಣಗತಿಯಲ್ಲಿ ಪ್ರಾರಂಭವಾಗಿಲ್ಲ, ಅದಕ್ಕಿನ್ನೂ ಮೂರು ತಿಂಗಳು ಹೆಚ್ಚು ಸಮಯ ಬೇಕಾಗುವುದು.

ಹಾಗಾದರೆ ಮಂಗಳೂರಿನಲ್ಲಿ ಪ್ರಯಾಣಿಕರ ಇಳಿಮುಖಕ್ಕೆ ಕಾರಣವೇನು?

ಅದಕುತ್ತರ , ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಭಾರತದ ಜೆಟ್ ಏರ್ವೇಸ್ (Jet Airways) ವಿಮಾನ ಸಂಸ್ಥೆ.
ಹೌದು, ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಮಂಗಳೂರಿನಿಂದ ಪ್ರತಿದಿನ ಜೆಟ್ ಏರ್ವೇಸ್ ನ ವಿಮಾನಗಳು ಮುಂಬೈ ಕಡೆಗೆ , ವಿಮಾನಗಳು ಬೆಂಗಳೂರಿನೆಡೆಗೆ ಹಾಗು ತಲಾ ೧ ವಿಮಾನ ದೆಹಲಿ, ದುಬೈ ಶಾರ್ಜಾ, ಹಾಗು ಅಬುದಾಬಿ ಕಡೆಗೆ ಪ್ರಯಾಣಿಸುತಿದ್ದವು. ಮಂಗಳೂರಿನಲ್ಲಿ   ಜೆಟ್ ಏರ್ವೇಸ್ ವಿಮಾನಗಳದ್ದೇ  ಮೇಲುಗೈ ಇತ್ತು. ಆದರೆ ಈಗ ಜೆಟ್ ಏರ್ವೇಸ್ ಸಂಸ್ಥೆಯ ಆರ್ಥಿಕ ಬಿಕ್ಕಟ್ಟಿನಿಂದ ಮಂಗಳೂರಿನ ಕಡೆ ಹಾರಾಟ ನಡೆಸುತ್ತಿದ್ದ ಎಲ್ಲಾ ಜೆಟ್ ಏರ್ವೇಸ್ ವಿಮಾನಗಳು ಒಂದರ ನಂತರ ಒಂದರಂತೆ ಸ್ಥಗಿತಗೊಂಡಿವೆ. (ಮೇಲಿನ ಮಂಗಳೂರಿನ ವಿಮಾನಯಾನ ತಾಣಗಳ ಪಟ್ಟಿಯಲ್ಲಿ ನೀವು ಗಮನಿಸಬಹುದು.) ದಿನಂಪ್ರತಿ ಇಲ್ಲಿ ೫೮ ವಿಮಾನಗಳು ಓಡಾಟ ನಡೆಸುತಿದ್ದವು ಆದರೆ ಈಗ ಈ ಸಂಖ್ಯೆ ೨೫ ಕ್ಕೆ ಕುಸಿದಿದೆ. ಇದರ ಬದಲಾಗಿ ಬೇರೆ ವಿಮಾನ ಸಂಸ್ಥೆಗಳು ಮಂಗಳೂರಿಗೆ ತಮ್ಮ ವಿಮಾನಗಳ ಸಂಖ್ಯೆಯನ್ನೇನು ಹೆಚ್ಚಿಸಿಲ್ಲ. ಹೀಗಾಗಿ ಕಳೆದ ಒಂದು ತಿಂಗಳಲ್ಲಿ ಮಂಗಳೂರಿನಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡಾ ೩೦ ರಷ್ಟು ಕುಗ್ಗಿದೆ. ಅಲ್ಲ ಸ್ವಾಮಿ ವಿಮಾನಗೆಳೆ ಇಲ್ಲದ ಮೇಲೆ ಜನರು ಪ್ರಯಾಣಿಸುವುದಾದರು ಹೇಗೆ ಹೇಳಿ?

ಜೆಟ್ ಏರ್ವೇಸ್ ಸಂಸ್ಥೆ ತನ್ನ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ನೀರಿಕ್ಷೆಯಲ್ಲಿದೆ. ಹೀಗಾಗಿ ತನ್ನ ವಿಮಾನಗಳನ್ನು ಪುನಃ ಹಿಂದಿನಂತೆಯೇ ಚಲಾಯಿಸಲು ಮೇ ತಿಂಗಳಿನ ಗಡುವು ತೆಗೆದುಕೊಂಡಿದೆ. ಹೀಗಾದರೆ ಮತ್ತೆ ಮಂಗಳೂರಿನಲ್ಲಿ ಮೊದಲಿನ ಹಾಗೆ ವಿಮಾನಗಳ ಸಂಖ್ಯೆ ದಿನಂಪ್ರತಿ ೫೦ ಮೀರಲಿದೆ ಹಾಗು ಪ್ರಯಾಣಿಕರ ಸಂಚಾರದಲ್ಲೂ ವೃದ್ಧಿಯಾಗಲಿದೆ.

ಇತ್ತೀಚಿನ ಬೆಳೆವಣಿಗೆಗಳ ಪ್ರಕಾರ ವಿಮಾನ ನಿಲ್ದಾಣಗಳನ್ನು ಖಾಸಗಿಕರಣ ಗೊಳಿಸುವ ನಿಟ್ಟಿನಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಈಗಾಗಲೇ ಅದಾನಿ ಸಂಸ್ಥೆ ಬಿಡ್ಡಿಂಗ್ ನಲ್ಲಿ ಗೆದ್ದು ಕೊಂಡಿದೆ. ಮಂಗಳೂರಿನ ವಿಮಾನ ನಿಲ್ದಾಣ ಖಾಸಗೀಕರಣಗೊಂಡರೆ ಸ್ವಲ್ಪ ಹೆಚ್ಚುವರಿ ಅಭಿವೃದ್ಧಿಯನ್ನು ನಾವು ಕಾಣಬಹುದಾಗಿದೆ. ಆದರೆ ವಿಮಾನ ನಿಲ್ದಾಣದ ರನ್ ವೇ ಉದ್ದಪಡಿಸುವ ವಿಚಾರ ಮಾತ್ರ ಇನ್ನೂ "ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರಾರು?" ಎಂಬಂತೆ ಉಳಿದು ಬಿಟ್ಟಿದೆ. ರನ್ ವೇ ಉದ್ದಗೊಂಡರೆ ಭವಿಷ್ಯದಲ್ಲಿ ಐರೋಪ್ಯ ರಾಷ್ಟ್ರಗಳಿಗೂ ಮಂಗಳೂರಿನಿಂದಲೇ ಪ್ರಯಾಣ ಬೆಳೆಸಬಹುದಾಗಿದೆ. (ಅದಕ್ಕಾಗಿ ಈಗ ಮಂಗಳೂರಿಗರು ಬೆಂಗಳೂರನ್ನು ಅವಲಂಬಿಸಿದ್ದಾರೆ) ಹೀಗಾದರೆ ಮಾತ್ರ ಮಂಗಳೂರು ಕಣ್ಣೂರಿನ ವಿಮಾನ ನಿಲ್ದಾಣಕ್ಕೆ ಸೆಡ್ಡು ಹೊಡೆದು ನಿಲ್ಲಲು ಸಾಧ್ಯ . ಇಲ್ಲದಿದ್ದರೆ ಕಣ್ಣೂರು ಐರೋಪ್ಯ ರಾಷ್ಟ್ರಗಳಿಗೆ ಸಂಪರ್ಕ ಒದಗಿಸಿ ಸ್ವತಃ ಮಂಗಳೂರಿಗರನ್ನೇ ಆಕರ್ಷಿಸಿದರೆ ಆಶ್ಚರ್ಯವೇನಿಲ್ಲ.

ಗುರುವಾರ, ಫೆಬ್ರವರಿ 21, 2019

"ಇರುವುದೊಂದೇ ಈ ಜೀವನವು" - ಕವನ 13




ಜಲಪಾತದ ನೀರಿನ ರಭಸದಂತೇ
ಉರುಳಿ ಹೋಗುತಿದೆ ಎನದಿನಗಳು ...
ಮನದಾಸೆಗಳೆಲ್ಲವೂ ತೀರದೆಯೇ
ಜೀವನದಂತ್ಯದ ಸಾಗರ ಸೇರುತಿಹುದು ...

ಮುಂದೆ ಸಾಗುತ್ತಿಲ್ಲ, ಹಿಂದೆ ಬರುವಂತಿಲ್ಲ
ನಡುವಲಿ ನಿಂತಿದೆ ಜೀವನ ನೌಕೆಯೂ ...
ಕನಸ ಕಂಡೇ ಉಳಿದಿರುವೆನು
ದಡ ಸೇರೋ ಗುರಿಯನು ಮರೆತು ...

ಮರೆತೇ ಕಳೆದರೂ, ಬದುಕಿ ಉಳಿದರೂ
ಕಾಲವು ಯಾರನು ಕಾಯದು ...
ಇಂದೇ ಎಂಬುವ ನಂಬಿಕೆ ಹಿಡಿಯದೇ 
ಪಯಣವು ಮುಂದೇ ಸಾಗದು ...

ಇರುವುದೊಂದೇ ಈ ಜೀವನವು
ಬರಲೀ ಸಾಧಿಸುವಂಥಹ ಮನಛಲವು...
ಉಳಿದಿರುವುದು ಕೆಲಕ್ಷಣಗಳೂ
ಸಾರ್ಥಕವಾಗುವಂತಾಗಲಿ ಈ ಜನುಮವು... 


ಮಂಗಳವಾರ, ಜುಲೈ 3, 2018

"ಕಾಗದ ದೋಣಿ" ಆಂಡ್ರೋಯ್ಡ್ ಅಪ್ಲಿಕೇಶನ್ ಬಳಸಿ

ಸ್ನೇಹಿತರೇ,
"ಕಾಗದ ದೋಣಿ" ಓದುವುದು ಈಗ ಮತ್ತಷ್ಟು ಸುಲಭವಾಗಿದ್ದು ನಮ್ಮ ಹೊಸ "ಕಾಗದ ದೋಣಿ" ಆಂಡ್ರೋಯ್ಡ್ ಅಪ್ಲಿಕೇಶನ್ ಬಳಸಿ ನಿಮ್ಮ ಮೊಬೈಲ್ ನಲಿ.

ಇಲ್ಲಿ ದೊರೆಯುವುದು

ಶನಿವಾರ, ಜೂನ್ 23, 2018

ಮಳೆ "ಕಾಲ - ಚಕ್ರ" - ಕವನ 12


ಓ ಸುಡುವ ಸೂರ್ಯನೇ
ನಿನಗೇಕೆ ಕೋಪವೇ ...
ಬಿಸಿಲ ಬೇಗೆ ನೆಲಕೆ ಬಡಿದು
 ಭೂತಾಯಿಯು ನರಳಿದೆ ...

ಓ ಮರಗಿಡ ಬೆಟ್ಟವೇ
ಸುಮ್ಮನೇಕೆ ನಿಂತಿರುವೇ ...
ನೀವು ತಡೆಯದ ತಂಗಾಳಿ
ಊರಬಿಟ್ಟು ಮರೆಯಾಗಿದೆ ...


ಓ ಅಲೆಮಾರಿ ಗಾಳಿಯೇ
ಎನ ವಿಳಾಸವ ಮರೆತೆಯೇ ...
ಕರೆದುಕೊಂಡು ಬಾರೊ ಒಮ್ಮೆ
ಬಿಳಿಮೋಡಗಳ ಹಿಂಡನೇ ...

ಓ ಬೆಳ್ಳಿ ಮೋಡವೇ
ಭೂತಾಯಿಯು ಬೇಡವೆ ...
ಬಿಸಿಲಬೇನೆಗೆ  ನರಳೋ ನೋಡಿ
ಕಣ್ ಮಳೆಹನಿಗಳ ಸುರಿಸಿರೆ ...

ಓ ಮಳೆಹನಿಗಳ ಮಾಲೆಯೇ
ನನ್ನ ದೂರ ತಿಳಿಯದೆ ...
ನಿನ್ನ ಬೆರೆತು ಈ ನೆಲವು
ಹಸಿರು ಹಸಿರಾ ಪಸರಿಸೆ ...

ಯಾವುದೊ ಈ ಮಾಯೆಯೋ
ಬಿಸಿಲು ಮಳೆಯ ಜಾಲವೋ ...
ಮಳೆ "ಕಾಲ - ಚಕ್ರ"ದೊಳಗೆ
ಉಕ್ಕಿ ಹರಿಯಲಿ ಏನ ಭಾವನೇ ..

ಗುರುವಾರ, ಮಾರ್ಚ್ 15, 2018

“ಸೋಮಾರಿ ಗಾನ” - ಕವನ 11



ಹೊತ್ತು ಕಳೆದರೇನಂತೇ 
ಜೊತೆಗೆ ಬರುವನು ಅವನು ..
ಸುತ್ತ ಇರುವವರ ತಿಳಿಯದೆ
ಎನಬೆನ್ನ ಬಿಡನು ಇವನು ..

ರವಿ ಬಂದರೇನಂತೇ
ಅವನಿಲ್ಲವೇ ನನಗಿಂದು ..
ಹೊತ್ತು ಕಳೆದರೂ ಹೋಗಲಿ
ಹೊಟ್ಟೆಗಿಟ್ಟು ಕೂಡ ಮರೆವೆನು ..

ಸ್ವಚ್ಛವಿಲ್ಲ ಎಂದರೇನಂತೇ
ಬೆಚ್ಚ ಮಲಗ ಬೇಕಿನ್ನು ..
ಎದ್ದು ಹೊರಡಬೇಕೆಂದರೆ
ಮುಗ್ಗರಿಸಿ ಬೀಳುವೆ ನಿನಬಲೆಗೆಂದು ..

ಅರ್ಧ ದಿನವು ನಿನದಾದರೇನಂತೇ
ನಾನಲ್ಲವೆ ನಿನ ಗುಲಾಮನು ..
ಯಾವ ಕೆಲಸವನೇಕೆ ಮಾಡಲಿ 
"ಸೋಮಾರಿ" ಎಂದೇಳುವೆ ನಿನ್ನ ಹೆಸರನು ..

ಭಾನುವಾರ, ಫೆಬ್ರವರಿ 18, 2018

“ಗಾಳಿ ಮಾತು” - ಕವನ 10





ಕಣ್ಣ ಸಿಲುಕದ ಗಾಳಿಯೊಂದು
ನುಸುಳಿ ಮನೆಗೆ ಬಂದಿದೆ..
ದಾರಿ ಮರೆತು ಬಂದಂತಿದೆ
ತರಗೆಲೆಗಳು ಅದರ ಜೊತೆಗೆಯೇ..

ಬಟ್ಟೆ ಬರೆಯು ಪುಟಗಳೆಲ್ಲ
ಹೆದರಿಕೊಂಡು ಓಡಿವೆ..
ಇದರ ಸ್ವಾಗತ ಬಯಸಿಕೊಂಡು
ಮರಗಿಡಗಳು ಬಾಗಿವೆ..

ಹಕ್ಕಿ ಹುಳುಗಳು ನಿನ್ನ ಬಗೆಯೆ
ಚೀರಿಕೊಂಡು ಸುತ್ತಿವೆ..
ನಿನ್ನ ತಂಪು ಮಾಡಲೆಂದೆ
ಮಳೆಹನಿಗಳು ಉದಿರಿವೆ..

ನಿನ್ನ ದಯೆಯೊ ನಿನ್ನ ಮಾಯೆಯೊ
ನನಗೊಂದೂ ತಿಳಿಯದು..
ನಿನ್ನ ನಂಬಿಕೊಂಡ ಜಗವು
ಬದುಕುವುದನ್ನ ಕಲಿತಿದೆ..

ಮಂಗಳವಾರ, ಜುಲೈ 4, 2017

“ಜನನ-ಮರಣ” - ಕವನ 9











ನಿದಿರೆಯೆಂಬ ಲೋಕದಲಿ
ನಡೆಯುತ್ತಿದೆ ಹೊಸ ತಿರುವುಗಳು..
ನಡುಗನಸಿನ ಪಾತ್ರದೊಳಗೆ
ನನ್ನನ್ನೊಮ್ಮೆ ಯಾರೋ ಕರೆವರು..


ಕಣ್ತೆರೆದು ನೋಡುತ್ತಿರಲು
ಹೊಸಜಗವ ನಾ ಕಂಡಿಹೆನು..
ಎಲ್ಲೋ ನೋಡಿರುವ ಈಜಗವು
ಹೊಸಬೆಳಕಲಿಂದು ಬೆರೆತಿಹುದು..


ಅಂದು ಕಂಡ ಇದೇ ಭುವಿಯು
ಮಂಜಾ ಮನದಿ ಮೂಡಿಹುದು..
ನಯನಗಳೆರಡು ಮಾಡಿವೆಯೊ ಮೋಡಿ
ನವಲೋಕದಂತಿಂದು ಕಾಣುವುದು..


ಮತ್ತೆ ಮರಣ ಮತ್ತೆ ಜನುಮ
ಪ್ರತಿದಿನವು ನಡೆವುದು..
ಕನಸು ನಿಜವೋ, ಕಣ್ತೆರೆದರೆ ನಿಜವೋ
ತಿಳಿಯದೆ ಮನವು ಕೊರಗುವುದು..


ಹೊಸಲೋಕದಿಂದ ಮತ್ತೆ ಮರಣ
ನಿದಿರೆಯಲೇ ನಾ ಕಳೆದೆನು..
ಮರುಜನನವು ಸಿಗುವುದೊ ನಾತಿಳಿಯೇ
ನಂಬಿಕೆಯೊಂದೆ ಇಲ್ಲಿ ಉಳಿದಿಹುದು..

ಮಂಗಳವಾರ, ಮೇ 23, 2017

7ರ ಮಗ್ಗಿಯಲ್ಲಿ ಜೀವನ ಚಕ್ರದ ಗಮ್ಮತ್ತು - ಟಾಂಗ್-ಕಿಂಗ್ (ಲೇಖನ) 1

7ರ ಮಗ್ಗಿಯಲ್ಲಿ ಜೀವನ ಚಕ್ರದ ಗಮ್ಮತ್ತು*


7 x 1 = 7 ಬಾಲ್ಯ ಪ್ರವೇಶ
7 x 2 = 14  ಯೌವ್ವನ ಪ್ರವೇಶ
7 x 3 = 21  ಪ್ರೀತಿ, ಪ್ರೇಮ, ಪ್ರಣಯ
7 x 4 = 28  ವಿವಾಹ, ಸ೦ತಾನ ಪ್ರಾಪ್ತಿ
7 x 5 = 35  ಸಂಸಾರ ಸಾಗರದಲ್ಲಿ ಈಜು ಸ್ಪರ್ದೆ
7 x 6 = 42  ಮಕ್ಕಳ ಯೌವ್ವನ ಪ್ರವೇಷ
7 x 7 = 49  ಸಂಸಾರದಲ್ಲಿ ರಾಜಕೀಯ, ನಾನು ನನ್ನ ಮನೆಯಲ್ಲಿ ಪರಕೀಯ
7 x 8 = 56  ನಿವೃತ್ತಿ, ಮಾವ ಅಥವಾ ಅಳಿಯ ಆಗುವ ಯೋ (ರೋ) ಗ
7 x 9 = 63  ಅರವತ್ತಕ್ಕೆ ಅರಳು ಮರಳು, ಷಷ್ಟಿ ಪೂರ್ತಿ
7 x 10 = 70 ವಿದಾಯ.!!!
ಸೋ .....ಇರೋ ತನಕ ಜಾಲಿ .ಆಮೇಲೆ ಖಾಲಿ ಊರಿಗೋಂದ್ ಊಟ...ಗೋಡೆಗೊಂದ್.... ಫೋಟೋ. ಅಸ್ಟೆ ಜೀವನ..... 

ಭಾನುವಾರ, ಏಪ್ರಿಲ್ 2, 2017

“ಸಮಯ ಮತ್ತು ಆಲೋಚನೆ” – ನಿಖರ ಮಾತು 3



ಜೀವನದಲ್ಲಿ ಏನೋ ಮಾಡಬೇಕೆಂಬ ಉತ್ಸಾಹ, ಆದರೆ ಮಾಡುವುದಾದರೂ ಏನು ? ಯಾವುದು ನನ್ನ ಗುರಿ? ನಾನು ತಪ್ಪಾದ ಹಾದಿಯಲ್ಲಿರುವನೇ? ಹೀಗೆ ಹಲವಾರು ಯೋಚನೆಗಳನ್ನ ಮಾಡುತ್ತಾ ಸಮಯ ಕಳೆಯುತಿದ್ದ ನನಗೆ ತಕ್ಷಣ ಮನದಿಂದ ಬಂದ ಉತ್ತರ “ಇಲ್ಲ, ನಿನ್ನ ಹಾದಿ ಸರಿಯಾಗಿದೆ, ಏನೋ ನಿನ್ನಿಂದಾಗಬೇಕು ಅದಕ್ಕೆ ಇಲ್ಲಿದ್ದೀಯ, ಅದು ಆಗುವುದಂತು ನಿಜ, ನಿನ್ನ ಪ್ರಯತ್ನ ಹಾಗು ಚಟುವಟಿಕೆಗಳನ್ನು ಬಿಡಬೇಡ.”

ಹೌದಲ್ಲವೆ?, ಇದು ನಿಜವೆಂದು ಅನಿಸತೊಡಗಿತು. ತಕ್ಷಣವೆ ಮನಸ್ಸನ್ನು ಬೇರೊಂದು ಚಟುವಟಿಕೆಗಳಲ್ಲಿ ಮಗ್ನನಾಗಿರಸುವಂತೆ ಮಾಡಿತು. ಪ್ರತಿದಿನದ ವ್ಯಾಯಾಮ, ದಿನಕ್ಕೆ ಸ್ವಲ್ಪ ಪುಸ್ತಕ ಓದುವುದು, ಅಡುಗೆ ಮಾಡುವುದು, ಕೊಂಚ ಹೊಸ ಭಾಷೆ ಅಥವಾ ವಿಷಯಗಳನ್ನು ಕಲಿಯುವುದು ಇಲ್ಲವೇ ಕವಿತೆ-ಲೇಖನಗಳನ್ನ ಬರೆಯುವುದು ಹೀಗೆ ಏನಾದರೂ ಚಟುವಟಿಕೆಗಳಲ್ಲಿ ತೊಡಗಿರುವ ನಾನು ಎಲ್ಲೋ ಗುರಿ ತಲುಪಲು ಇವುಗಳು ಸಹಾಯ ಮಾಡುವುದೆಂಬ ನಂಬಿಕೆ. ಸಮಯವನ್ನು ಬಳಸಿರಿ ಇಲ್ಲವೇ ಹಾಗೆ ಕಳೆಯಿರಿ, ಖಂಡಿತವಾಗಿಯೂ ಸಮಯವಂತು ನಿಮಗಾಗಿ ನಿಲ್ಲುವುದಿಲ್ಲ. ನಮ್ಮ ಜೀವನದ ಈ ಸಮಯವನ್ನು ಹಾಗೆಯೇ ಕಳೆಯುವುದರ ಬದಲು ಏನಾದರೂ ಮಾಡುತ್ತಾ ಕಳೆಯುವ ಅಂತ ಈ ರೀತಿ ಚಟುವಟಿಕೆಗಳಿಗೆ ಮುನ್ನುಡಿ ಹಾಕಿದೆ. ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಸಿಗುವುದೋ ಇಲ್ಲವೋ, ಸಮಯವೆಂಬ ಅಮೂಲ್ಯ ಮೂಲಭೂತವನ್ನು ಬಳಸಿದೆನೆಂಬ ನೆಮ್ಮದಿ ದೊರೆಯುವುದು.

ಯಾವುದೋ ಒಂದು ಮಾದ್ಯಮದಲ್ಲಿ ತುಂಬಾ ಒಳ್ಳೆಯ ವಾಕ್ಯವೊಂದನ್ನು ಕಂಡೆನು. “ಸಾಧ್ಯ ಹಾಗು ಅಸಾಧ್ಯ ಇವೆರಡು ಕೂಡ ಸರಿಯಾದದ್ದೆ”, ಇದರ ಬಗ್ಗೆ ಯೋಚಿಸಿದಾಗ ನನಗೆ ತೋಚಿದ್ದು “ಹೌದು”. ಯಾವುದೇ ವಿಷಯದ ಆಯ್ಕೆಯು ಒಂದು ನಿರ್ದಿಷ್ಟ ಹಾದಿಯನ್ನು ತೋರಿಸುವುದು, “ಸಾಧ್ಯ”ವೆಂದರೆ ಅದೊಂದು ಹಾದಿಯಾದರೆ “ಅಸಾಧ್ಯ”ವೆಂಬುದು ಇನ್ನೊಂದು ಹಾದಿಯಲ್ಲಿ ಕರೆದುಕೊಂಡು ಹೋಗುವುದು. ಈಗೆ ಯೋಚಿಸುತ್ತಾ ಆಲೋಚನೆಗಳು ಎಷ್ಟು ಆಳಕ್ಕೆ ಹೋಯಿತೆಂದರೆ “ಇಲ್ಲಿ ಯಾವುದು ಕೂಡ ತಪ್ಪಲ್ಲ, ಎಲ್ಲವೂ ಸರಿ” ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿತು. ಎಲ್ಲಾ ವಿಷಯಗಳಿಗೂ ಅದರದೇ ಆದಂತಹ ಅರ್ಥವಿರುವುದೆಂದು ಅರಿವಾಯಿತು. ಕೆಲವೊಮ್ಮೆ ಕೆಲವರ ಕೆಲವು ಮಾತುಗಳು ಕೂಡ ಸರಿಯಿಲ್ಲವೆಂದು ಎನಿಸುವುದುಂಟು, ಖಂಡಿತವಾಗಿಯೂ ಅದು ಬೇರೊಂದು ಬಗೆಯಲ್ಲಿ ಸರಿಯಾಗೇ ಇರಬಹುದು. ಎಲ್ಲಾ ಅವರವರ ಯೋಚನೆಗೆ ಬಿಟ್ಟದ್ದು. ಯೋಚನೆಗಳ ಆಳವು ಅನಂತವೆಂಬುದನ್ನು ನಾನು ತಿಳಿದುಕೊಂಡೆ.

ಈ ಮೆದುಳು ಎಂಬುವ ಜೀವಿಯಲ್ಲಿರುವ ಅದ್ಭುತ ಅಂಗ, ಕೆಲ ವಿದ್ಯುತ್ ಸಂದೇಶಗಳಲ್ಲಿ ಏನೇನೋ ಬದಲಾಯಿಸಿಬಿಡುತ್ತದೆ. ಹೀಗೆ ಯೋಚನೆಗಳಲ್ಲಿ ಮಗ್ನರಾಗಿರುವ ನಾನು ನನ್ನ ಗುರಿಯ ಚಿತ್ರಣ ನೋಡುವ ಸಮಯವು ತುಂಬಾ ಹತ್ತರದಲ್ಲಿರುವುದು, ಕೆಲದಿನಗಳೇ ಬಾಕಿ ಇದೆ ಅಂತ ಈ ಮನಕ್ಕೆ ಮುನ್ಸೂಚನೆ ಕೊಡುತ್ತಾ ಇರುತ್ತೆ. ನನ್ನಲ್ಲಿರುವ ಈ ಛಲ, ಶಕ್ತಿ ಎಲ್ಲಾದರೂ ಬಳಸಿ ಏನಾದರೂ ಬದಲಾವಣೆಗೆ ಕ್ರಾಂತಿ ಹೂಡಬೇಕೆಂಬ ತವಕದಲ್ಲೇ ಇರುವೆನು. ಯಾರಿಗೆ ಗೊತ್ತು! ಇವೆಲ್ಲವು ವಯಸ್ಸಿನ ಮಾಯೆಯೋ ಇಲ್ಲವೆ ಮನಸಿನ ಆಟವೇ! ಆದರೆ ಪ್ರತಿದಿನವು ಅದೇ ಶಕ್ತಿ, ಅದೇ ಛಲ ನನ್ನನ್ನು ಹುಮ್ಮಸ್ಸಿನಿಂದ ಇರಲು ಸಹಾಯ ಮಾಡುತ್ತಿರುತ್ತೆ. “ತಾಳ್ಮೆಯೊಂದಿದ್ದರೆ ಎಲ್ಲವೂ ಸಿಗುವುದು” ಎಂದು ಹೇಳಿರುವ ನಮ್ಮ ಹಿರಿಯರು, ಅವರ ಮಾತಿಗೆ ಬೆಲೆ ನೀಡಿ ತಾಳ್ಮೆಯಿಂದಲೇ ಎಲ್ಲವ ಅನುಸರಿಸಿ ಹೊಗುತ್ತಿರುವೆನು. ಸಾಧನೆಯೇ ಜೀವನದ ಗುರಿಯಿಲ್ಲದಿರಬಹುದು,ಆದರೆ ನಮ್ಮ ಜೀವನಕ್ಕೆ ಅರ್ಥ ಕಲ್ಪಿಸುವುದು ನಮ್ಮದೇ ಜವಬ್ದಾರಿಯಾಗಿರುವುದರಿಂದ ಆ ಅರ್ಥವನ್ನು ಕಟ್ಟುವ ಪ್ರಯತ್ನವು, ಬೆಳೆಸುವ ಶಕ್ತಿಯೂ ಸಿಗಲಿ ಅಂತ ಸಂಕಲ್ಪಿಸತ್ತಾ ಇಂದಿನಿಂದಲೇ ಸಮಯದ ಜೊತೆಯಲ್ಲೇ ಆಲೋಚನೆಗಳ ಸಾಗರದಲ್ಲಿ ಈಜುವ ಎಂಬುದು ನನ್ನ ಆಶಯ.

ಬುಧವಾರ, ಫೆಬ್ರವರಿ 22, 2017

“ಹೊಸ ಅನುಭವ” - ಕವನ 8



ಮುಂಜಾನೆಯು ಹೊಸತಾದಂತಿದೆ..
ಸೂರ್ಯಕಿರಣವು ತಿಳಿಯಾಗಿದೆ..
ತಂಗಾಳಿಯ ರಭಸಕೆ ತಾಕಿದ ದೇಹವು
ಮೆಲ್ಲನೆ ರೋಮಾಂಚನಗೊಂಡಿದೆ….

ಎಲೆಗಳು ಕುಣಿದಂತಿದೆ..
ಹಕ್ಕಿಗಳು ಖುಷಿಯಾಗಿದೆ..
ಕನಸ ಕಾಣುವ ಕಣ್ಣಿಗೆ ಎಲ್ಲವು
ಇಂದು ಸೊಗಸಾಗಿ ಕಂಡಿದೆ….

ಸಮಯ ಬದಲಾದಂತಿದೆ..
ದಿನವೂ ಹಸಿರಾಗಿದೆ..
ಇವುಗಳ ನಡುವಿನ ನನ್ನ ಜೀವನ
ಹೊಸ ಅನುಭವವ ಪಡೆದಿದೆ….

ಶುಕ್ರವಾರ, ಜನವರಿ 27, 2017

“ಕನಸಿನ ಲೋಕದಲಿ” – ನಿಖರ ಮಾತು 2



ಕನಸ್ಸು, ಇದೊಂದು ವಿಚಿತ್ರ ಹಾಗು ಸೋಜಿಗವಾದ ಪ್ರಕ್ರಿಯೆ, ಎಲ್ಲಾ ಮನುಷ್ಯರೂ ಹಾಗು ಜೀವಿಗಳಲ್ಲೂ ಕಾಣಬಹುದಂತಹ ವಿಶೇಷ ಶಕ್ತಿ ಎಂದೆನಬಹುದು. ಕನಸೆಂಬ ಪದಕ್ಕೆ ಅರ್ಥವನ್ನು ಹುಡುಕುತ್ತಾ ಹೋದರೆ ಹಲವಾರು ಕಲ್ಪನೆಗಳು ಮನಸ್ಸಿಗೆ ಮೂಡುತ್ತದೆ. ರಾತ್ರಿ ಮಲಗಿದರೆ ನಿದಿರೆಯಲಿ ಕನಸ್ಸು, ಬೆಳಿಗ್ಗೆ ಎದ್ದರೆ ಹಗಲುಗನಸು, ಭವಿಷ್ಯದ ಬಗ್ಗೆಯ ಹಲವಾರು ಕನಸುಗಳು ಹೀಗೆ ಇದೊಂದು ಕೊನೆಯಿಲ್ಲದ ಹಾಗು ಜೀವನದಲ್ಲಿ ಹೆಚ್ಚುಕಾಲ ಕಳೆಯುವಂತಹ ಲೋಕ, “ಕನಸಿನ ಲೋಕ”.

ಕನಸಲಿ ಇಲ್ಲದನ್ನು ಪಡೆಯಬಹುದು, ಆಗದನ್ನೂ ಸಾಧಿಸಬಹುದು, ಆದರೆ ಇದು ಕಾಲ್ಪನಿಕವಷ್ಟೆ. ಈ ರೀತಿ ಕನಸುಗಳನ್ನು ಕಾಣುತ್ತಿರುವ ನಾವು ನಿಜವಾಗಿ ಎಚ್ಚರವಿರುವುದೇ ಕೆಲವು ಕ್ಷಣಗಳು ಮಾತ್ರ. ಎಷ್ಟೇ ಪ್ರಯತ್ನಪಟ್ಟು ವರ್ತಮಾನಕಾಲಕ್ಕೆ ಬಂದರೂ ಕೆಲಕ್ಷಣದಲ್ಲೇ ನಮ್ಮದೆ ಆದಂತಹ ಕಾಲ್ಪನಿಕ ಲೋಕಕ್ಕೆ ಹೋಗಿಬಿಡುತ್ತೇವೆ. ಇದೊಂತರಹದ ಕನಸ್ಸಾದರೆ ಜೀವನದಲ್ಲಿ ಸಾಧಿಸುವ, ಗುರಿ ತಲುಪುವ ಕನಸ್ಸು ಇನ್ನೊಂದು.

ಸಾಧಿಸಬೇಕು ಎಂಬ ಕನಸ್ಸು ಅದು ನಮ್ಮ ಗುರಿಯನ್ನು ತೋರಿಸುತ್ತದೆ. ಕನಸ್ಸೆಂಬುದು ಮುನ್ನುಡಿಯಷ್ಟೇ, ಆದರೆ ಇಡೀ ಜೀವನವೆಂಬ ಪುಸ್ತಕವನ್ನು ನಾವೇ ಬರೆಯುವ ಪ್ರಯತ್ನ ಮಾಡಬೇಕು. ಆಗ ಮಾತ್ರ ಕನಸ್ಸೆಂಬುದನ್ನು ನನಸ್ಸಾಗುವ ದಾರಿಯಲಿ ಸಾಗಿಸಬಹುದು. ಆದರೆ ನಾವು ಮುನ್ನುಡಿ ಬರೆಯುತ್ತಾ ಪುಸ್ತಕ ಖಾಲಿ ಉಳಿಸಿದರೆ ಕನಸ್ಸಿಗೆ ಬೆಲೆಯಾದರು ಎಲ್ಲಿರುವುದು. ಕನಸಿನ ಜೊತೆ ಪ್ರಯತ್ನವು ಹಾಗು ಜೀವನವೆಂಬ ಪುಸ್ತಕವನ್ನು ಬರೆಯುವ ಸಾಹಸವ ಮಾಡುವುದು ಮುಖ್ಯ.ಇವೆರಡರ ಹೊರತು ಕನಸ್ಸು ಕನಸ್ಸಾಗಿಯೆ ಉಳಿದಿರುವುದು. ಇಲ್ಲವಾದಲ್ಲಿ ಬದುಕಿನ ಕೊನೆಯ ಪುಟ ಬಂದಾಗಲು ಇಡೀ ಪುಸ್ತಕವು ಖಾಲಿಯಾಗಿಯೇ ಉಳಿದಿರುತ್ತದೆ. ಆದರೆ ನಮ್ಮಂತಹ ಯುವಜನತೆಯಲ್ಲಿ “ಪ್ರಯತ್ನ” ಹಾಗೂ “ಸಾಹಸ”ದ ಕೊರತೆಯೇ ಇರುವುದು ಹೊರತು ಕನಸ್ಸುಗಳುಂಟು ನೂರೆಂಟು.

ಒಂದು ಮಗು ಶಾಲೆಗೆ ಹೋಗುವಾಗ “ನಾನು ಬಸ್ಸ್ ಚಾಲಕನಾಗಬೇಕು” ಎಂದು, “ಶಿಕ್ಷಕಿ” ಯಾಗಬೇಕೆಂದು ಇಲ್ಲವೇ “ಪೋಲೀಸ್ ಆಗುವೆ” ಎಂದು ಕನಸ್ಸು ಕಂಡಿರುತ್ತದೆ. ವಯಸ್ಸಿನಲಿ ದೊಡ್ಡವನಾಗುತ್ತಿದ್ದಂತೆ ಕನಸುಗಳು ಗೌರವದ ರೂಪದಲ್ಲೋ ಇಲ್ಲವೇ ಹಣ-ಅಂತಸ್ತಿನ ರೂಪದಲ್ಲಿ ಪರಿವರ್ತನೆಗೊಳ್ಳುತ್ತೆ. ಆದ್ದರಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಾ ಕೃಷಿವೆಂಬುವ ಮಾನವನಿಗೆ ಆಧಾರವಾದ ಉದ್ಯೋಗವು ಅಂತ್ಯಗೊಳ್ಳುತ್ತರುವುದಲ್ಲದೆ ಬರೀ ಇಂಜಿನೀಯರ್ ಹಾಗು ಡಾಕ್ಟರ್ಗಳ ಸಂಖ್ಯೆ ಹೆಚ್ಚಾಗಲು ಒಂದು ಕಾರಣವಾಗಿದೆ. ಇದರ ಫಲ “ನಿರುದ್ಯೋಗ”. ಹೀಗೆ ಕನಸುಗಳು ಗೌರವ ಹಾಗು ಹಣ-ಅಂತಸ್ತಿನ ಪಾಲಗುತ್ತದೆಯೋ ಆ ಸ್ವಾರ್ಥಭಾವನೆ ಜೀವನದಲ್ಲಿ ಇವೆರಡು ಎಷ್ಟೇ ಲಭಿಸಿದರೂ ಅಸಂಪೂರ್ಣದ ಅರಿವು ಮೂಡಿ ಮನಸಿಗೆ ಜಿಗುಪ್ಸೆಯನ್ನುಂಟು ಮಾಡುತ್ತದೆ. ಅದಲ್ಲದೆ ಎಲ್ಲಾ ಇಂಜಿನೀಯರ್ ಹಾಗು ಡಾಕ್ಟರ್ ಗಳು ಸಾರ್ಥಿಗಳೆಂದು ಹೇಳಲು ಸಾಧ್ಯವಿಲ್ಲ, ಸಾಧಿಸುವ ಮನವುಳ್ಳರೂ ಇರುವರು.

ರಾತ್ರಿ ಬೀಳುವ ಕನಸಿಗೂ ಜೀವನದ ಕನಸಿಗೂ ಏನೋ ಸಂಭಂದ ಇದೆ, ಅದೇನಂದರೆ ಎಲ್ಲಾ ರಾತ್ರಿ ಬೀಳುವ ಕನಸ್ಸು ಮುಂಜಾನೆ ಏಳುವಾಗ ನೆನಪಲ್ಲಿರದು. ಹಾಗೆಯೇ ಜೀವನದಲ್ಲಿ ಕಾಣುತ್ತಿರುವ ಕನಸುಗಳನ್ನು ಒಂದು ಕಡೆಯಿಂದ ಮರೆಯುತ್ತಾ ಬರುತ್ತೇವೆ. “ಕನಸು ಕಾಣಿರಿ” ಎಂದು ಹೇಳಿದ ಅಬ್ದುಲ್ ಕಲಾಂರವರ ಮಾತುಗಳನ್ನು ಅನ್ಯರ್ಥ ಮಾಡಿಕೊಂಡ ನಮ್ಮ ಯುವಕರು “ಕಾಣುವ ಕನಸ್ಸು ನೀವು ಮಲಗಿದರೂ ನಿದಿರೆಯನ್ನು ಮಾಡಬಿಡದೆ ಕಾಡುತ್ತಿರಬೇಕು” ಎಂಬುವ ಉಳಿದ ಮಾತನ್ನು ಅರಿಯದೇ ನಿದ್ದೆ ಮಾಡುತ್ತಾ ಕನಸ್ಸನ್ನು ಕಾಣಲು ಶುರುಮಾಡಿದ್ದರೆ. ಏನೊಂದು ವಿಪರ್ಯ್ಯಸ.

ಯಾವುದೇ ಸಾಧನೆಗೆ ಕನಸ್ಸು ಮುಖ್ಯ, ಇಲ್ಲವಾದಲ್ಲಿ ಈ ಆಧುನಿಕ ಯುಗವು ಈ ಮಟ್ಟಿಗೆ ತಲುಪಿರುವುದಲ್ಲಿ ಅನುಮಾನ ಪಡಬೇಕಾದೀತು. ಎಂತಹ ಕನಸ್ಸುಗಳಿರಲಿ ಪ್ರಯತ್ನವಂಬುದು ನಡೆಯಲೇಬೇಕು. ಗೆಲುವನ್ನು ಕಾಣುವುದು ಕನಸ್ಸಾಗಿರಬೇಕು ಹೊರತು ಸೋಲು ಬಾರದಿರಲಿ ಎಂಬುವ ಕನಸ್ಸ ನೆನೆಯಬೇಡಿ. ಸೋಲೆಂಬುದು ಗುರುವಿದ್ದಂತೆ, ಜೀವನ ಪಾಠ ಕಲಿಸುತ್ತದೆ. ಇದನ್ನರಿಯದ ಹಲವರು ಸೋಲು ಬರದಿರಲಿ ಎನ್ನುತ್ತಾ ಒಮ್ಮೆ ಸೋತೊಡನೆ ಆ ಅಧ್ಬುತ ಕನಸ್ಸನ್ನೇ ಕೈಬಿಡುವರು. ಸೋಲು ಎಷ್ಟೇ ಆಗಲಿ ಗೆಲುವೇ ಪರಮ ಲಕ್ಷ್ಯ ಎಂದರಿತರೆ ಗುರಿ ಮುಟ್ಟುವುದರಲ್ಲಿ ಅನುಮಾನವೇ ಇಲ್ಲವೆಂಬುವ ನನ್ನ ಅಭಿಪ್ರಾಯ.

ಒಡನಾಡಿಗಳೇ,
ಕನಸ್ಸೆಂಬ ಶಿಖರದಲಿ,
ಪ್ರಯತ್ನಗಳ ಸುರಿಮಾಲೆಯಿರಲಿ..
ಕಷ್ಟಗಳೇ ಕಲ್ಲುಮುಳ್ಳುಗಳಿಲ್ಲಿ,
ಸೋಲಿಗೆ ಬಗ್ಗದಿರಲಿ,
ಏನೇ ಆಗಲೀ,
ಈ ಜೀವನ ಗುರಿಯನ್ನು ತಲುಪಲಿ….

ಮಂಗಳವಾರ, ಡಿಸೆಂಬರ್ 27, 2016

Video : Mehebani - Beauty of Nature (ಮೆಹೆರ್ಬಾನಿ - ನಿಸರ್ಗದ ಸೌಂದರ್ಯತೆ)


ಸುಂದರ ನಿಸರ್ಗದ ನಡುವಿನ ನನ್ನ ಪ್ರಯಣದ ಕುರಿತು ಇದೊಂದು ಲಘು ಚಲನಚಿತ್ರ.
ಹಾಡು : ಮೆಹೆರ್ಬಾನಿ (ಸಿನಿಮಾ : ದ ಶಾಕೀನ್ಸ್)

This is a short video about my journey between beautiful nature.

Song : Meherbani (Movie : The Shaukeens)

ಗುರುವಾರ, ಡಿಸೆಂಬರ್ 22, 2016

“ನೋಡಬನ್ನಿ ನಮ್ಮೂರ” - ಕವನ 7




ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಕಲರವ
ಇದ ನೋಡಬಯಸಿದ ಆ ಬಾನ ಸೂರ್ಯ…
ಎಲ್ಲೆಲ್ಲೂ ತುಂಬಿರುವುದು ಉದುರುವ ಮಂಜಿನಸರ
ಇದರ ಸೆರೆಯಲಿ ಬಾರದೆ ರವಿಕಿರಣವು ಮಾಯ…

ಕೋಳಿಯ ಕೂಗಿಗೆ ಶುರುವಾಗುವುದು ನನ್ನ ಪ್ರತಿದಿನ
ಎನಮೇಲೆ ಮಲಗಿರುವುದು ಬೆಕ್ಕು, ಮುದುರಿಕೊಂಡು ಬಾಲವನ್ನ…
ಬಾಗಿಲ ತೆಗೆದರೆ ಕಂಡಿತು ಮಂಜಲಿ ಕೂಡಿದ ಸ್ವರ್ಗಬನ
ಆಹಾ! ಎಂತಹ ಜನುಮ ನನ್ನದು, ಮರೆತೆನು ಆಕ್ಷಣ…

ಕರುವು ಆಡುವುದು ಕೊಟ್ಟಿಗೆಯಲಿ ಹಸುವ ಸುತ್ತಿಬಂದು
ಇದನೋಡಿ ನಾಯಿಯು ಬಾಲವಾಡಿಸಿತು ಬೊಗಳಿಕೊಂಡು…
ತಣ್ಣನೆ ಗಾಳಿಚಲನೆಗೆ ಮರಗಿಡಗಳು ನಡುಗಿತು ಚಳಿಗೆಂದು
ದೋಸೆಯ ಮಾಡುತ್ತಿರುವಳು ನನ್ನಮ್ಮ, ಆಕಾಶವಾಣಿಯ ಕೇಳಿಕೊಂಡು…

ಸಿಗದಿನ್ನೊಂದು ಜನ್ಮ, ನೋಡಬನ್ನಿ ನಮ್ಮೂರ
ಮಲೆನಾಡ ಹಸಿರಸಿರಿಯಲಿ ಬೇಸರವೆಂಬುದು ತುಂಬಾದೂರ…
ಕಾಫಿ-ಚಹಾ ಮೆಣಸು, ಮರ ಗಿಡಗಳ ಸರದಾರ
ಕವಿಯ ಮಾಡಿತು ಎನ್ನ, ಇದ ನೆನೆದರೆ ಸಡಗರ…

ಬುಧವಾರ, ಡಿಸೆಂಬರ್ 21, 2016

"ಬ್ರೇಕ್ ಫಾಸ್ಟು" - (ಬತ್ತಿ - ೧)



ಬೆಳಗಿನ ಜಾವ ಗಂಟೆ ಎಂಟಾದಾಗ,
ಕೆಲಸಕೆ ಹೊರಡುವ ತವಕ,
ಆಚೆಗೆ ಈಚೆಗೆ ಹೋಗಿ, ಶರ್ಟು ಪ್ಯಾಂಟು ಧರಿಸಿ,
ಹೊರಟು ನಿಂತಾಗ, ಬಸ್ಸು ಬರಲು ಇದೆ ಕೇವಲ ಹತ್ತು ನಿಮಿಷ ಸಮಯ.

ಹೊಟ್ಟೆ ಚುರುಗುಟ್ಟುತಿದೆ,
ಬೆಳಗಿನ ಹಸಿವು ರೌದ್ರಾವತಾರವನ್ನಾಡುತಿದೆ,
ಬೇಗ ಎದ್ದು ಚಪಾತಿಯೋ, ಅವಲಕ್ಕಿಯೋ ಮಾಡೋಣವೆಂದುಕೊಂಡಿದ್ದೆ,
ಲೇಟಾಗಿ ಎದ್ದಿದರಿಂದ ಏನು ಅಂದುಕೊಂಡಿದ್ದೆ ಎಂದು ಎಣಿಸುವ ಸಮಯವೂ ಇಲ್ಲದಾಗಿದೆ.

ಅದೇನು ಮಹಾ.. ಕಂಪನಿಯಲ್ಲಿ ತಿಂಡಿ ಸಿಗುತ್ತಲ್ಲ ಎಂದ ಒಬ್ಬ ಭೂಪ,
ಹೌದಪ್ಪ.. ಆದರೆ ನನ್ನ ಕಷ್ಟ ನಾನೆ ಬಲ್ಲೆ ಪಾಪ.
ಸಿಂಪಲ್ಲಾಗೆ ಹೇಳುವುದಾದರೆ ಕಂಪನಿಯಲ್ಲಿ ಸಿಗುವ ತಿಂಡಿ ನನ್ನ ಬಾಯಿಗೆ ಹಿಡಿಸಲ್ಲ,
ದೋಸೆ, ನೀರ್ ದೋಸೆ ತಿಂದು ತೇಗಿದ ಹೊಟ್ಟೆ ಸಮೋಸ, ಬಜಿಯ ಸಹಿಸಲ್ಲ.

ಗೌತಮ ಹೇಳಿದ್ದ ಆಸೆಯೇ ದುಃಖಕ್ಕೆ ಮೂಲ,
ನನಗಂತು ಸದ್ಯಕ್ಕೆ ನನ್ನ ಹಸಿವಿನ ಆಳವೇ ಅದನೆಲ್ಲವಮೀರಿದ ಮೂಲ.
ಖಾಲಿ ಹೊಟ್ಟೆಯಲಿ ಮಧ್ಯಾಹ್ನದವರೆಗೂ ಸಮಯ ಕಳೆಯಬೇಕಾದ ಸ್ಥಿತಿ,
ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದೇ ನನಗೆ ಉಳಿದಿರುವ ಗತಿ.

ದಿನ ಸಮಯ ಕಳೆದಿದ್ದರೂ ಬಸ್ಸು ಬಂದಿರಲಿಲ್ಲ ,
ಹಾಗಂತ ಹೇಳಿ ನಾವು ಸುಮ್ಮನೆ ನಿಂತುಕೊಳ್ಳುವವರಲ್ಲ ,
ಸುತ್ತ ಮುತ್ತ ಹಾರಾಡುವ ಹಕ್ಕಿಗಳ ಸೊಭಗನು ಸವಿಯುವ ಅವಕಾಶವನ್ನು ಕಳೆದುಕೊಳ್ಳುವವರಲ್ಲ,
ದಿನದಿಂದ ನನ್ನ ಬೆಳಗಿನ ಹೊಟ್ಟೆ ಹಸಿವಿನ ವಿಧಿಯು ಬದಲಾಗುವುದೆಂದು ನನಗೂ ತಿಳಿದಿರಲಿಲ್ಲ.


ಒಂದು ದಿನ ಬಂದಿದ್ದ ಒಬ್ಬ ಅಣ್ಣ
ಸುಮಾರಾಗಿತ್ತು ಅವನ ಬಣ್ಣ,
ಅವನ ಬಳಿ ಇತ್ತು  ಒಂದು ಮಹಾ ಪಾತ್ರೆ,
ಪಾತ್ರೆಯ ಬಾಯಿ ತೆರೆದಾಗ ಅಲ್ಲೇ ಆಗಿತ್ತು ನಮ್ಮ ಕಣ್ಮನಸಿಗೆ  ಒಂದು ಲಘು ಜಾತ್ರೆ.

ಪಾತ್ರೆಯಲ್ಲಿತ್ತು ಇಡ್ಲಿ ... ವಡಾ ...
ಅದನ್ನು ನೋಡಿದ್ದೆ ತಡ,
ಬಂದಿತ್ತು ನಮ್ಮ ಬಾಯಲ್ಲಿ ನೀರು ಒಂದು ಕೊಡ.

ಮೊದಲು ನನ್ನ ಗೆಳೆಯ ಮುನ್ನೆಜ್ಜೆಯಿಟ್ಟ ತಣಿಸಲು ಆತನ ಹೊಟ್ಟೆಯ ಬರ,
ತಿಂಡಿಯ ಬಗೆ ವಿಚಾರಿಸಿ ಕೇಳಿದಹೇಗಿದೆಯಣ್ಣ ಇದರ ದರ?
ಆತ "ಹತ್ತು (೧೦) ರುಪಾಯಿಗೆ ಮೂರು () ಇಡ್ಲಿ ಅಥವಾ ಎರಡು () ವಡ", ಎಂದ ಬಳಸಿ ಅವನ ಗಡುಸಾದ ಸ್ವರ,
ಇದನ್ನು ಕೇಳಿದ ನಮಗಂತು ಲಭಿಸಿತ್ತು  ಸ್ವರ್ಗ, ಬರೇ ಮೂರೇ ಮೂರು ಇಂಚು ದೂರ.

ಅಂದಿನಿಂದ ಖಾಯಂ ಆಗಿತ್ತು ನಮ್ಮ ಬೆಳಗ್ಗಿನ  ಬ್ರೇಕ್ ಫಾಸ್ಟು
ಇಡ್ಲಿ ಜೊತೆ ತೆಂಗಿನ ಚಟ್ನಿ.. ಆಹಾ .. ಟೆಸ್ಟೋ ಟೆಸ್ಟು.
ನಾವು ಬಯಸಿದ ತಿಂಡಿ ನಮ್ಮನ್ನು ಹುಡುಕಿ ಬಂದಿತ್ತು,
ಬೆಳಗಿನ ಖಾಲಿ ಹೊಟ್ಟೆಯ ಕೊರಗು ಈಗ ಮರೆಯಾಗಿತ್ತು.

ಇಷ್ಟು ದಿನ ಮನಸಿಲ್ಲದ ಮನಸಲಿ ಎದ್ದು ಲೇಟಾದರೆ ಬಸ್ಸು ತಪ್ಪುತ್ತಿತ್ತು
ಆದರೆ ಈಗ ಲೇಟಾದರೆ ಬಸ್ಸಿನ ಮೊದಲು ಇಡ್ಲಿ ತಿನ್ನುವ ಅವಕಾಶ ತಪ್ಪುತ್ತಿತ್ತು,
ಮೊದಲು ಕೆಲಸಕೆ ಹೋಗುವ ಅನಿವಾರ್ಯತೆ ನಮ್ಮನ್ನು ಎಳೆಯುತ್ತಿತ್ತು,
ಆದರೆ ಈಗ ಇಡ್ಲಿ ತಿನ್ನುವ ಹಂಬಲ ನಮ್ಮನ್ನು ಸಳೆಯುತಿತ್ತು.

 ಈಗಂತು ನಡುನಡುವೆ ಇಡ್ಲಿ ಅಣ್ಣ ಬರದೇ ಹೋದರೆ ಆಕಾಶವೇ ಕಳಚಿ ಬಂದಂತಾಗುತ್ತದೆ,
ನಮ್ಮಲ್ಲಿ ಕೆಲವರಿಗಂತು ಕಂಪನಿ ಕೆಲಸಗಿಂತ ಬೆಳಗಿನ ಇಡ್ಲಿಯೇ ಮುಖ್ಯವಾಗಿದೆ.
ಅಷ್ಟಕ್ಕೂ ನೀವೇ ಹೇಳಿ ಇಡೀ ದಿನ ಲವಲವಿಕೆಯಿಂದಿರಲು ಯಾವುದು ಬೇಕು ಫಸ್ಟು ?
ಅಲ್ವೇ ಅದು ರುಚಿಯಾದ ಆರೋಗ್ಯಕರ ಹೊಟ್ಟೆ ತುಂಬಿಸುವ ಬ್ರೇಕ್ ಫಾಸ್ಟು ?


-ಲ್ಯಾಂಡಲ್.


ಭಾನುವಾರ, ನವೆಂಬರ್ 20, 2016

"ನಾ ಬರುವ ಆ ಸಂಜೆ…" - ಕವನ 6



ನಾ ಬರುವ ಆ ಸಂಜೆ…
ಬಾನಲಿ ರವಿಯು ಕೆಂಪಾಗಿರುವುದ ನಾಕಂಡೆ.
ಆ ಸೊಗಸ ನೋಡಬಂತು ಹಕ್ಕಿಗಳ ಹಿಂಡೆ.
ರಸಿಕನಾದೆನು ನಾನಿನಗೆ ಆ ದಿನದಂದೆ….

ನಾ ಬರುವ ಆ ಸಂಜೆ…
ಮಕ್ಕಳೆಲ್ಲ ಆಡುತ್ತಿರುವರು ಎಲ್ಲವ ಮರೆತಂತೆ.
ಬದಿಯಲ್ಲಿರುವ ಶ್ವಾನವು ಕುಳಿತಿರುವುದು ಅವರ ನೋಡಿ ನಗುವಂತೆ.
ಖುಷಿಯೆಂಬುದು ಒಂದೇ ಈ ನಿನ್ನ ಸೃಷ್ಟಿಯ ಮುಂದೆ….

ನಾ ಬರುವ ಆ ಸಂಜೆ…
ಕರುವೊಂದು ಓಡಿಬಂತು ಹಸಿವಾದಂತೆ.
ಕೊರಳಗಂಟೆಯ ಸದ್ದಿಗೆ ಹಸುವು ಕರೆಯಿತದವ “ಅಂಬೇ”.
ಎಲ್ಲವೂ ನಿನ್ನ ಒಲವಯ್ಯ, ಮರಳಾದೆನು ನಿನಗೆಂದೆ….

ನಾ ಬರುವ ಆ ಸಂಜೆ….
ನಾನೆನೆಯುವೆ ಎಲ್ಲವ ಪಡೆದಂತೆ.
ಪಕೃತಿಯೇ ಈ ನಿನ್ನ ಮಾಯೆಯ ನೋಡಿ ನಾಸೋತೆ.
ನಿನ್ನ ನೋಡಿದ ಈ ಜನುಮ ಸಾರ್ಥಕವಾದಂತೆ…

ಶುಕ್ರವಾರ, ಅಕ್ಟೋಬರ್ 21, 2016

" ಕನಸಲಿ ಕಳೆದಿರುವೆ.." - ಕವನ 5




ನಿದಿರೆಯೇ ಬಾರದ ಈ ಕಣ್ಣಲಿ
ಕನಸೊಂದ ನಾ ಕಂಡಿರುವೆ…

ಕನಸ ಕಂಡ ಮರುಕ್ಷಣವೇ
ಅದರೊಳಗೆ ನಾ ಕಳೆದಿರುವೆ…

ಕನಸೇ ನೀ ಛಲವ ಬಿಡದೆ
ನಾ ಎಲ್ಲವ ತೊರೆದಿರುವೆ…

ಕನಸ ಲೋಕವ ನನಸ ಮಾಡಲು
ನಾ ನನ್ನೆ ಕಾಡಿರುವೆ…

ಬದುಕೆಂಬ ಈ ಪಯಣದ ಬೆರಗಿಗೆ
ನಾ ಎಲ್ಲವ ಮರೆತಿವೆ..