ಕನಸ್ಸು, ಇದೊಂದು ವಿಚಿತ್ರ ಹಾಗು ಸೋಜಿಗವಾದ ಪ್ರಕ್ರಿಯೆ, ಎಲ್ಲಾ ಮನುಷ್ಯರೂ ಹಾಗು ಜೀವಿಗಳಲ್ಲೂ ಕಾಣಬಹುದಂತಹ ವಿಶೇಷ ಶಕ್ತಿ ಎಂದೆನಬಹುದು. ಕನಸೆಂಬ ಪದಕ್ಕೆ ಅರ್ಥವನ್ನು ಹುಡುಕುತ್ತಾ ಹೋದರೆ ಹಲವಾರು ಕಲ್ಪನೆಗಳು ಮನಸ್ಸಿಗೆ ಮೂಡುತ್ತದೆ. ರಾತ್ರಿ ಮಲಗಿದರೆ ನಿದಿರೆಯಲಿ ಕನಸ್ಸು, ಬೆಳಿಗ್ಗೆ ಎದ್ದರೆ ಹಗಲುಗನಸು, ಭವಿಷ್ಯದ ಬಗ್ಗೆಯ ಹಲವಾರು ಕನಸುಗಳು ಹೀಗೆ ಇದೊಂದು ಕೊನೆಯಿಲ್ಲದ ಹಾಗು ಜೀವನದಲ್ಲಿ ಹೆಚ್ಚುಕಾಲ ಕಳೆಯುವಂತಹ ಲೋಕ, “ಕನಸಿನ ಲೋಕ”.
ಕನಸಲಿ ಇಲ್ಲದನ್ನು ಪಡೆಯಬಹುದು, ಆಗದನ್ನೂ ಸಾಧಿಸಬಹುದು, ಆದರೆ ಇದು ಕಾಲ್ಪನಿಕವಷ್ಟೆ. ಈ ರೀತಿ ಕನಸುಗಳನ್ನು ಕಾಣುತ್ತಿರುವ ನಾವು ನಿಜವಾಗಿ ಎಚ್ಚರವಿರುವುದೇ ಕೆಲವು ಕ್ಷಣಗಳು ಮಾತ್ರ. ಎಷ್ಟೇ ಪ್ರಯತ್ನಪಟ್ಟು ವರ್ತಮಾನಕಾಲಕ್ಕೆ ಬಂದರೂ ಕೆಲಕ್ಷಣದಲ್ಲೇ ನಮ್ಮದೆ ಆದಂತಹ ಕಾಲ್ಪನಿಕ ಲೋಕಕ್ಕೆ ಹೋಗಿಬಿಡುತ್ತೇವೆ. ಇದೊಂತರಹದ ಕನಸ್ಸಾದರೆ ಜೀವನದಲ್ಲಿ ಸಾಧಿಸುವ, ಗುರಿ ತಲುಪುವ ಕನಸ್ಸು ಇನ್ನೊಂದು.
ಸಾಧಿಸಬೇಕು ಎಂಬ ಕನಸ್ಸು ಅದು ನಮ್ಮ ಗುರಿಯನ್ನು ತೋರಿಸುತ್ತದೆ. ಕನಸ್ಸೆಂಬುದು ಮುನ್ನುಡಿಯಷ್ಟೇ, ಆದರೆ ಇಡೀ ಜೀವನವೆಂಬ ಪುಸ್ತಕವನ್ನು ನಾವೇ ಬರೆಯುವ ಪ್ರಯತ್ನ ಮಾಡಬೇಕು. ಆಗ ಮಾತ್ರ ಕನಸ್ಸೆಂಬುದನ್ನು ನನಸ್ಸಾಗುವ ದಾರಿಯಲಿ ಸಾಗಿಸಬಹುದು. ಆದರೆ ನಾವು ಮುನ್ನುಡಿ ಬರೆಯುತ್ತಾ ಪುಸ್ತಕ ಖಾಲಿ ಉಳಿಸಿದರೆ ಕನಸ್ಸಿಗೆ ಬೆಲೆಯಾದರು ಎಲ್ಲಿರುವುದು. ಕನಸಿನ ಜೊತೆ ಪ್ರಯತ್ನವು ಹಾಗು ಜೀವನವೆಂಬ ಪುಸ್ತಕವನ್ನು ಬರೆಯುವ ಸಾಹಸವ ಮಾಡುವುದು ಮುಖ್ಯ.ಇವೆರಡರ ಹೊರತು ಕನಸ್ಸು ಕನಸ್ಸಾಗಿಯೆ ಉಳಿದಿರುವುದು. ಇಲ್ಲವಾದಲ್ಲಿ ಬದುಕಿನ ಕೊನೆಯ ಪುಟ ಬಂದಾಗಲು ಇಡೀ ಪುಸ್ತಕವು ಖಾಲಿಯಾಗಿಯೇ ಉಳಿದಿರುತ್ತದೆ. ಆದರೆ ನಮ್ಮಂತಹ ಯುವಜನತೆಯಲ್ಲಿ “ಪ್ರಯತ್ನ” ಹಾಗೂ “ಸಾಹಸ”ದ ಕೊರತೆಯೇ ಇರುವುದು ಹೊರತು ಕನಸ್ಸುಗಳುಂಟು ನೂರೆಂಟು.
ಒಂದು ಮಗು ಶಾಲೆಗೆ ಹೋಗುವಾಗ “ನಾನು ಬಸ್ಸ್ ಚಾಲಕನಾಗಬೇಕು” ಎಂದು, “ಶಿಕ್ಷಕಿ” ಯಾಗಬೇಕೆಂದು ಇಲ್ಲವೇ “ಪೋಲೀಸ್ ಆಗುವೆ” ಎಂದು ಕನಸ್ಸು ಕಂಡಿರುತ್ತದೆ. ವಯಸ್ಸಿನಲಿ ದೊಡ್ಡವನಾಗುತ್ತಿದ್ದಂತೆ ಕನಸುಗಳು ಗೌರವದ ರೂಪದಲ್ಲೋ ಇಲ್ಲವೇ ಹಣ-ಅಂತಸ್ತಿನ ರೂಪದಲ್ಲಿ ಪರಿವರ್ತನೆಗೊಳ್ಳುತ್ತೆ. ಆದ್ದರಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಾ ಕೃಷಿವೆಂಬುವ ಮಾನವನಿಗೆ ಆಧಾರವಾದ ಉದ್ಯೋಗವು ಅಂತ್ಯಗೊಳ್ಳುತ್ತರುವುದಲ್ಲದೆ ಬರೀ ಇಂಜಿನೀಯರ್ ಹಾಗು ಡಾಕ್ಟರ್ಗಳ ಸಂಖ್ಯೆ ಹೆಚ್ಚಾಗಲು ಒಂದು ಕಾರಣವಾಗಿದೆ. ಇದರ ಫಲ “ನಿರುದ್ಯೋಗ”. ಹೀಗೆ ಕನಸುಗಳು ಗೌರವ ಹಾಗು ಹಣ-ಅಂತಸ್ತಿನ ಪಾಲಗುತ್ತದೆಯೋ ಆ ಸ್ವಾರ್ಥಭಾವನೆ ಜೀವನದಲ್ಲಿ ಇವೆರಡು ಎಷ್ಟೇ ಲಭಿಸಿದರೂ ಅಸಂಪೂರ್ಣದ ಅರಿವು ಮೂಡಿ ಮನಸಿಗೆ ಜಿಗುಪ್ಸೆಯನ್ನುಂಟು ಮಾಡುತ್ತದೆ. ಅದಲ್ಲದೆ ಎಲ್ಲಾ ಇಂಜಿನೀಯರ್ ಹಾಗು ಡಾಕ್ಟರ್ ಗಳು ಸಾರ್ಥಿಗಳೆಂದು ಹೇಳಲು ಸಾಧ್ಯವಿಲ್ಲ, ಸಾಧಿಸುವ ಮನವುಳ್ಳರೂ ಇರುವರು.
ರಾತ್ರಿ ಬೀಳುವ ಕನಸಿಗೂ ಜೀವನದ ಕನಸಿಗೂ ಏನೋ ಸಂಭಂದ ಇದೆ, ಅದೇನಂದರೆ ಎಲ್ಲಾ ರಾತ್ರಿ ಬೀಳುವ ಕನಸ್ಸು ಮುಂಜಾನೆ ಏಳುವಾಗ ನೆನಪಲ್ಲಿರದು. ಹಾಗೆಯೇ ಜೀವನದಲ್ಲಿ ಕಾಣುತ್ತಿರುವ ಕನಸುಗಳನ್ನು ಒಂದು ಕಡೆಯಿಂದ ಮರೆಯುತ್ತಾ ಬರುತ್ತೇವೆ. “ಕನಸು ಕಾಣಿರಿ” ಎಂದು ಹೇಳಿದ ಅಬ್ದುಲ್ ಕಲಾಂರವರ ಮಾತುಗಳನ್ನು ಅನ್ಯರ್ಥ ಮಾಡಿಕೊಂಡ ನಮ್ಮ ಯುವಕರು “ಕಾಣುವ ಕನಸ್ಸು ನೀವು ಮಲಗಿದರೂ ನಿದಿರೆಯನ್ನು ಮಾಡಬಿಡದೆ ಕಾಡುತ್ತಿರಬೇಕು” ಎಂಬುವ ಉಳಿದ ಮಾತನ್ನು ಅರಿಯದೇ ನಿದ್ದೆ ಮಾಡುತ್ತಾ ಕನಸ್ಸನ್ನು ಕಾಣಲು ಶುರುಮಾಡಿದ್ದರೆ. ಏನೊಂದು ವಿಪರ್ಯ್ಯಸ.
ಯಾವುದೇ ಸಾಧನೆಗೆ ಕನಸ್ಸು ಮುಖ್ಯ, ಇಲ್ಲವಾದಲ್ಲಿ ಈ ಆಧುನಿಕ ಯುಗವು ಈ ಮಟ್ಟಿಗೆ ತಲುಪಿರುವುದಲ್ಲಿ ಅನುಮಾನ ಪಡಬೇಕಾದೀತು. ಎಂತಹ ಕನಸ್ಸುಗಳಿರಲಿ ಪ್ರಯತ್ನವಂಬುದು ನಡೆಯಲೇಬೇಕು. ಗೆಲುವನ್ನು ಕಾಣುವುದು ಕನಸ್ಸಾಗಿರಬೇಕು ಹೊರತು ಸೋಲು ಬಾರದಿರಲಿ ಎಂಬುವ ಕನಸ್ಸ ನೆನೆಯಬೇಡಿ. ಸೋಲೆಂಬುದು ಗುರುವಿದ್ದಂತೆ, ಜೀವನ ಪಾಠ ಕಲಿಸುತ್ತದೆ. ಇದನ್ನರಿಯದ ಹಲವರು ಸೋಲು ಬರದಿರಲಿ ಎನ್ನುತ್ತಾ ಒಮ್ಮೆ ಸೋತೊಡನೆ ಆ ಅಧ್ಬುತ ಕನಸ್ಸನ್ನೇ ಕೈಬಿಡುವರು. ಸೋಲು ಎಷ್ಟೇ ಆಗಲಿ ಗೆಲುವೇ ಪರಮ ಲಕ್ಷ್ಯ ಎಂದರಿತರೆ ಗುರಿ ಮುಟ್ಟುವುದರಲ್ಲಿ ಅನುಮಾನವೇ ಇಲ್ಲವೆಂಬುವ ನನ್ನ ಅಭಿಪ್ರಾಯ.
ಒಡನಾಡಿಗಳೇ,
ಕನಸ್ಸೆಂಬ ಶಿಖರದಲಿ,
ಪ್ರಯತ್ನಗಳ ಸುರಿಮಾಲೆಯಿರಲಿ..
ಕಷ್ಟಗಳೇ ಕಲ್ಲುಮುಳ್ಳುಗಳಿಲ್ಲಿ,
ಸೋಲಿಗೆ ಬಗ್ಗದಿರಲಿ,
ಏನೇ ಆಗಲೀ,
ಈ ಜೀವನ ಗುರಿಯನ್ನು ತಲುಪಲಿ….

0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ